ಬಿಬಿಎಂಪಿ ಎಚ್ಎಸ್ಆರ್ ಉಪ ವಿಭಾಗದ ವ್ಯಾಪ್ತಿಗೆ ಬರುವ ಗಾರ್ವೇಬಾವಿ ಪಾಳ್ಯ ಶಂಕರನಾರಾಯಣ ರೆಸಿಡೆನ್ಸಿಯಲ್ಲಿ ನಿವಾಸಿ ಎಸ್.ಎಂ. ಕೃಷ್ಣ ಎಂಬುವರಿಗೆ ಜೂನ್ 25ರಿಂದ ಜುಲೈ 2ರವರೆಗೆ ಹೋಮ್ ಕ್ವಾರಂಟೈನ್ ವಿಧಿಸಲಾಗಿತ್ತು. ಅದನ್ನು ಉಲ್ಲಂಘಿಸಿ ಅವರು ಹೊರಗೆ ಓಡಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ವಾಟ್ಸ್ಆ್ಯಪ್ ಮೂಲಕ ದೂರು ನೀಡಿದ್ದರು. ಪರಿಶೀಲನೆ ನಡೆಸಲು ಬಿಬಿಎಂಪಿ ಅಧಿಕಾರಿ ಬಂದಾಗ ಕೃಷ್ಣ ಅವರು ತಮ್ಮ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಬೇಗೂರು ಠಾಣೆಗೆ ತೆರಳಿ ದೂರು ನೀಡಿದ್ದರು.