‘ಎಲ್ಲರೂ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರ ಸೇರಬೇಕು ಅಂದುಕೊಂಡೆ. ಆದರೆ, ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಲು ಸೌಲಭ್ಯವಿತ್ತು. ಹೀಗಾಗಿ, ಆಸ್ಪತ್ರೆಗೆ ಹೋದರೆ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಹಾಸಿಗೆಯ ಸಮಸ್ಯೆಯಾಗಲಿದೆ ಎಂದ ಯೋಚಿಸಿ, ನಾನು, ಮಗಳು ಮತ್ತು ಮಗ ಮನೆ ಆರೈಕೆಗೆ ಒಳಗಾದೆವು. ಮರುದಿನ ಪತ್ನಿಯ ಕೋವಿಡ್ ಪರೀಕ್ಷೆ ನಡೆಯಿತು. ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿತು. ಐದು ದಿನ ಕಳೆದರೂ ಅಳಿಯನ ವರದಿ ಬರಲಿಲ್ಲ. ಕೊನೆಗೆ ನಮ್ಮ ವಲಯದ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರ ನೆರವಿನಿಂದ ಅಳಿಯನ ಪಾಸಿಟಿವ್ ವರದಿ ಕೈಸೇರಿತು.’