‘ಕೊರೊನಾ ಬಗ್ಗೆ ಹೊರಗಡೆ ಅನಗತ್ಯ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆಸ್ಪತ್ರೆಯಲ್ಲಿ ಎಂದೂ ನನಗೆ ಜೀವಕ್ಕೆ ಅಪಾಯವಿದೆ ಎಂದೆನಿಸಲಿಲ್ಲ. ವೈದ್ಯರು ಹಾಗೂ ಶುಶ್ರೂಷಕರು ಚೆನ್ನಾಗಿ ಆರೈಕೆ ಮಾಡಿದರು. ಪೊಂಗಲ್, ದೋಸೆ, ಇಡ್ಲಿ ಮುಂತಾದ ಸ್ವಾದಿಷ್ಟ ಉಪಾಹಾರವನ್ನು ಬೆಳಿಗ್ಗೆ ನೀಡುತ್ತಿದ್ದರು. ಚಪಾತಿ, ಅನ್ನ–ಸಾರು ಒಳಗೊಂಡರಾತ್ರಿ ಊಟ 7 ಗಂಟೆಗೆ ಬರುತ್ತಿತ್ತು. ಹೀಗಾಗಿ ಊಟ–ತಿಂಡಿಯ ಸಮಸ್ಯೆ ಯಾವತ್ತೂ ಆಗಿಲ್ಲ. ಎಷ್ಟೋ ಮಂದಿಗೆ ಅರಿವಿಲ್ಲದೆಯೇ ಈ ಸೋಂಕು ಬಂದುಹೋಗಿದೆ. ಭಯಕ್ಕೆ ಒಳಗಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇದು ಕೂಡ ಸಾಮಾನ್ಯವಾದ ಸೋಂಕು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.