‘ಉಪ್ಪಾರಪೇಟೆ ಠಾಣೆ ಕಾನ್ಸ್ಟೆಬಲ್ ಶಿವಕುಮಾರ್ ಹಾಗೂ ಹುಳಿಮಾವು ಸಂಚಾರ ಠಾಣೆ ಕಾನ್ಸ್ಟೆಬಲ್ ಮಣಿಕಂಠ ಬಂಧಿತರು. ಒಂದೇ ಬ್ಯಾಚ್ನಲ್ಲಿ ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದ ಅವರು, ಉಳಿದ ನಾಲ್ವರು ಆರೋಪಿಗಳ ಬೆಟ್ಟಿಂಗ್ ದಂಧೆಗೆ ನೆರವಾಗುತ್ತಿದ್ದರು. ದಾಳಿ ಬಗ್ಗೆ ಆರೋಪಿಗಳಿಗೆ ಮುಂಚಿತವಾಗಿ ಮಾಹಿತಿ ನೀಡುತ್ತಿದ್ದರು. ಅದಕ್ಕಾಗಿ ಹಣವನ್ನೂ ಪಡೆಯುತ್ತಿದ್ದರೆಂಬ ಮಾಹಿತಿ ಇದೆ’ ಎಂದೂ ಮೂಲಗಳು ಹೇಳಿವೆ.