‘ನಿವೇಶನ ಖರೀದಿ ಬಗ್ಗೆ ಪರಸ್ಪರ ಮಾತುಕತೆ ಆಗಿತ್ತು. 2022ರ ಡಿಸೆಂಬರ್ನಲ್ಲಿ ₹ 30 ಲಕ್ಷ ನೀಡಿ ನಿವೇಶನ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೆ. ಆರೋಪಿಗಳು ಇದುವರೆಗೂ ನಿವೇಶನ ನೀಡಿಲ್ಲ. ಈ ಬಗ್ಗೆ ಜೆ.ಪಿ.ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಸ್ಪಂದಿಸುತ್ತಿಲ್ಲ. ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ನನ್ನ ಹಣ ವಾಪಸು ಕೊಡಿಸಿ’ ಎಂದು ಅವರು ಕೋರಿದ್ದಾರೆ.