ಈ ಕುರಿತು ಪ್ರತಿಕ್ರಿಯಿಸಿದ ಮುಜರಾಯಿ ಇಲಾಖೆ ಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ), ಸೋಂಪುರ ನಾಡಕಚೇರಿಯ ಉಪ ತಹಶೀಲ್ದಾರ್ ಜುಂಜೇಗೌಡ, ‘ಇಲಾಖೆಯ ಸಹಾಯುಕ ಆಯುಕ್ತ ಶಿವಕುಮಾರಯ್ಯ ಮತ್ತು ಪೊಲೀಸರ ಸಮ್ಮುಖದಲ್ಲಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪಾರದರ್ಶಕವಾಗಿ ಎಣಿಕೆ ನಡೆದಿದೆ. ವಿಡಿಯೊದಲ್ಲಿ ಬಿಂಬಿಸಿದಂತೆ ಏನೂ ನಡೆದಿಲ್ಲ. ಇಂತಹ ಆರೋಪದಲ್ಲಿ ಹುರುಳಿಲ್ಲ’ ಎಂದರು.