ಸಿದ್ದಯ್ಯ ಅವರ ಬಾಲ್ಯದ ಕಥನದೊಂದಿಗೆ ಆರಂಭವಾಗುವ ನಾಟಕ ದಕ್ಲ ದೇವಿ, ದಕ್ಲ, ದಕ್ಲನ ಎಡ-ಬಲ ಮಕ್ಕಳ ಕಥೆಗಳ ಮೂಲಕ ಹಾದು ಹೋಗುತ್ತದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಿಸುವಂತಹ ಬೆಳಕಿಗಾಗಿಯೂ ನಾಟಕ ಹಂಬಲಿಸುತ್ತದೆ. ಅರೆ, ತಮಟೆಗಳ ಕಂಪನ ಆರಂಭದಿಂದ ಕೊನೆಯವರೆಗೂ ಈ ಪ್ರಯೋಗದಲ್ಲಿ ಆವರಿಸಿಕೊಂಡು ನಾಟಕಕ್ಕೊಂದು ವಿಶಿಷ್ಟ ಅನುಭೂತಿ ನೀಡುತ್ತದೆ. ಲಕ್ಷ್ಮಣ ಕೆ.ಪಿ. ಅವರು ರಚಿಸಿ, ನಿರ್ದೇಶಿಸಿದ ಈ ನಾಟಕದಲ್ಲಿ ಕಲಾವಿದರಾದ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡಗೂರು, ನರಸಿಂಹರಾಜು ಬಿ.ಕೆ., ಭರತ್ ಡಿಂಗ್ರಿ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.