ವೇದಿಕೆಯ ರಾಜ್ಯಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು, ಮಾದಿಗ ಸಮುದಾಯದವರೆಲ್ಲರನ್ನೂ ಸಂಘಟಿಸುವ ಮೂಲಕ ಈ ದಿನವನ್ನು ವಿಶ್ವ ಮಾದಿಗ ದಿನವನ್ನಾಗಿ ಆಚರಿಸಲು ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸುವ ಮುಖ್ಯ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ‘ ಎಂದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಳ್ಳಾರಿ ಹನುಮಂತಪ್ಪ, ರಾಜ್ಯಸಮಿತಿ ಸದಸ್ಯ ರಾಚೇನಹಳ್ಳಿ ವೆಂಕಟೇಶ್, ಮುಖಂಡರಾದ ರಾಮಚಂದ್ರ, ಆನಂದ್, ಸೋಮಶೇಖರ್ ಇದ್ದರು.