‘ಏಪ್ರಿಲ್ 4ರಂದು ನಾಗರಾಜ್, ಮೆಟ್ರೊ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಅವರ ಬಳಿ ಮೆಟ್ರೊ ಕಾರ್ಡ್ ಇರಲಿಲ್ಲ. ಹೀಗಾಗಿ, ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ಬಳಿಕ, ನಾಗರಾಜ್ ಪ್ರವೇಶ ದ್ವಾರದಲ್ಲೇ ನಿಂತಿದ್ದರು. ಮೂತ್ರ ವಿಸರ್ಜನೆಗೆ ಹೋಗಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ನಿಲ್ದಾಣದಿಂದ ಕೆಳಗೆ ಬಿದ್ದಿದ್ದರು. ನಂತರ, ತೀವ್ರವಾಗಿ ಗಾಯಗೊಂಡು ಅಲ್ಲಿಯೇ ಅವರ ಮೃತಪಟ್ಟಿರುವ ಶಂಕೆ ಇದೆ’ ಎಂದೂ ಪೊಲೀಸರು ಹೇಳಿದರು.