ಜನಾಗ್ರಹದ ಪರವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಎಚ್.ಆರ್. ಬಸವರಾಜಪ್ಪ, ಸ್ವರ್ಣಾ ಭಟ್, ನೂರ್ ಶ್ರೀಧರ್, ಕೆ.ಎಲ್. ಅಶೋಕ್ ಮೊದಲಾದವರು, ಈ ಆಗ್ರಹ ಪತ್ರಕ್ಕೆ ರಾಜ್ಯದ 650ಕ್ಕೂ ಹೆಚ್ಚು ಗಣ್ಯರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹಿ ಮಾಡಿದ್ದಾರೆ ಎಂದರು.