‘ಸರ್ಕಾರಿ ನೌಕರರಿಗೆ ಆದೇಶ ಮಾಡಿದ ರೀತಿಯಲ್ಲಿ ನಮಗೂ ಆದೇಶ ಮಾಡಿ ಹಳೆ ಪಿಂಚಣಿ ಒದಗಿಸಬೇಕು. ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ಶಿಕ್ಷಕ ಕಲ್ಯಾಣ ನಿಧಿ ಸ್ಥಾಪಿಸಬೇಕು. ನಿವೃತ್ತರಾದ ಮೇಲೆ ಸಂಧ್ಯಾಕಾಲದ ಜೀವನ ನಡೆಸಲು ನಿರ್ದಿಷ್ಟ ಧನ ಸಹಾಯ ನೀಡಬೇಕು’ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಜಿ.ಆರ್. ಹೆಬ್ಬೂರು, ಪದಾಧಿಕಾರಿಗಳಾದ ಗ.ಪು. ನಾಗೇಶ, ಜಿ.ಪಿ. ನಾಗರಾಜ, ಸಿ.ಡಿ. ರವಿ ಒತ್ತಾಯಿಸಿದ್ದಾರೆ.