<p><strong>ಪೀಣ್ಯ ದಾಸರಹಳ್ಳಿ:</strong>‘ತಮಿಳುನಾಡಿನ ರಾಜಕೀಯ ಪ್ರೇರಿತ ಅಡೆತಡೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಣಿಯಬಾರದು. ಮೇಕೆದಾಟು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು’ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಆಗ್ರಹಿಸಿದರು.</p>.<p>ಹೆಗ್ಗನಹಳ್ಳಿಯಲ್ಲಿ ಹಸಿರು ಪ್ರತಿ ಷ್ಠಾನದ ವತಿಯಿಂದ ಶನಿವಾರ ಆಯೋ ಜಿಸಿದ್ದ ಮೇಕೆದಾಟು ಯೋಜನೆ ಅನು ಷ್ಠಾನ ಕುರಿತ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಮುಂದಿನ 10 ವರ್ಷದಲ್ಲಿ ಬೆಂಗ ಳೂರಿನ ಜನಸಂಖ್ಯೆ ಎರಡು ಕೋಟಿ ಮೀರಲಿದೆ. ಇವರಿಗೆ ನೀರಿನ ಅಭಾವ ಎದುರಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಮೇಕೆದಾಟು ಯೋಜನೆ ಜಾರಿಯಾಗುವುದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ನೀರಿನ ಬವಣೆ ನೀಗಲಿದೆ’ ಎಂದು ಸಲಹೆ ನೀಡಿದರು.</p>.<p>ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಮಾತನಾಡಿ, ‘ತಮಿಳುನಾಡಿನ ರಾಜಕೀಯ ವನ್ನು ಎಲ್ಲ ಕನ್ನಡಿಗರು ಹಿಮ್ಮೆಟ್ಟಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಯೋಜನೆಯನ್ನು ಪೂರ್ಣಗೊಳಿಸ<br />ಬೇಕು’ ಎಂದು ಒತ್ತಾಯಿಸಿದರು.</p>.<p>ಜಯ ಕರ್ನಾಟಕ ಸಂಘಟನೆಯ ಬಿ.ಎನ್.ಜಗದೀಶ್ ಮಾತನಾಡಿ ‘ರಾಜ್ಯದ ಎಲ್ಲ ಸಂಸದರು ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕೇಂದ್ರಕ್ಕೆ ಏಕೆ ಒತ್ತಾಯಿಸುತ್ತಿಲ್ಲ, ಸಂಘಟನೆಗಳು ಮಾತ್ರ ಹೋರಾಟ ಮಾಡಬೇಕೆ?’ ಎಂದು ಪ್ರಶ್ನಿಸಿದರು.</p>.<p>ಸಭೆಯಲ್ಲಿ ಕನ್ನಡಪರ ಚಿಂತಕ<br />ವ.ಚ.ಚನ್ನೇಗೌಡ, ಎಂ.ಪ್ರಕಾಶ್ ಮೂರ್ತಿ, ಡಾ ಆಂಜನಪ್ಪ, ಯುವರಾಜ, ನಾಗರತ್ನ ಹಾಗೂ ವಿವಿಧ<br />ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ:</strong>‘ತಮಿಳುನಾಡಿನ ರಾಜಕೀಯ ಪ್ರೇರಿತ ಅಡೆತಡೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಣಿಯಬಾರದು. ಮೇಕೆದಾಟು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು’ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಆಗ್ರಹಿಸಿದರು.</p>.<p>ಹೆಗ್ಗನಹಳ್ಳಿಯಲ್ಲಿ ಹಸಿರು ಪ್ರತಿ ಷ್ಠಾನದ ವತಿಯಿಂದ ಶನಿವಾರ ಆಯೋ ಜಿಸಿದ್ದ ಮೇಕೆದಾಟು ಯೋಜನೆ ಅನು ಷ್ಠಾನ ಕುರಿತ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಮುಂದಿನ 10 ವರ್ಷದಲ್ಲಿ ಬೆಂಗ ಳೂರಿನ ಜನಸಂಖ್ಯೆ ಎರಡು ಕೋಟಿ ಮೀರಲಿದೆ. ಇವರಿಗೆ ನೀರಿನ ಅಭಾವ ಎದುರಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಮೇಕೆದಾಟು ಯೋಜನೆ ಜಾರಿಯಾಗುವುದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ನೀರಿನ ಬವಣೆ ನೀಗಲಿದೆ’ ಎಂದು ಸಲಹೆ ನೀಡಿದರು.</p>.<p>ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಮಾತನಾಡಿ, ‘ತಮಿಳುನಾಡಿನ ರಾಜಕೀಯ ವನ್ನು ಎಲ್ಲ ಕನ್ನಡಿಗರು ಹಿಮ್ಮೆಟ್ಟಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಯೋಜನೆಯನ್ನು ಪೂರ್ಣಗೊಳಿಸ<br />ಬೇಕು’ ಎಂದು ಒತ್ತಾಯಿಸಿದರು.</p>.<p>ಜಯ ಕರ್ನಾಟಕ ಸಂಘಟನೆಯ ಬಿ.ಎನ್.ಜಗದೀಶ್ ಮಾತನಾಡಿ ‘ರಾಜ್ಯದ ಎಲ್ಲ ಸಂಸದರು ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕೇಂದ್ರಕ್ಕೆ ಏಕೆ ಒತ್ತಾಯಿಸುತ್ತಿಲ್ಲ, ಸಂಘಟನೆಗಳು ಮಾತ್ರ ಹೋರಾಟ ಮಾಡಬೇಕೆ?’ ಎಂದು ಪ್ರಶ್ನಿಸಿದರು.</p>.<p>ಸಭೆಯಲ್ಲಿ ಕನ್ನಡಪರ ಚಿಂತಕ<br />ವ.ಚ.ಚನ್ನೇಗೌಡ, ಎಂ.ಪ್ರಕಾಶ್ ಮೂರ್ತಿ, ಡಾ ಆಂಜನಪ್ಪ, ಯುವರಾಜ, ನಾಗರತ್ನ ಹಾಗೂ ವಿವಿಧ<br />ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>