ಜಾಥಾ, ಯಲಹಂಕ ಉಪನಗರದ ಬಸ್ ನಿಲ್ದಾಣದ ಮುಖ್ಯರಸ್ತೆಯ ಮೂಲಕ ಚಿಕ್ಕಬೊಮ್ಮಸಂದ್ರ ಕ್ರಾಸ್ ಮಾರ್ಗವಾಗಿ ಶೇಷಾದ್ರಿಪುರ ಕಾಲೇಜಿನ ರಸ್ತೆ, ದೊಡ್ಡಬಳ್ಳಾಪುರ ರಸ್ತೆಯ ಮಾರ್ಗವಾಗಿ ಅಳ್ಳಾಳಸಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಬಿ. ಬಸವಲಿಂಗಪ್ಪ ಅವರ ಪುಣ್ಯಭೂಮಿಗೆ ತಲುಪಿತು. ನಂತರ ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಾಥಾದಲ್ಲಿ ಡಿಎಸ್ಎಸ್ನ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.