ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಕೆ.ಆರ್. ಪೇಟೆಯಲ್ಲಿ ಸಚಿವ ನಾರಾಯಣಗೌಡ ಅವರು ವಾರಕ್ಕೊಮ್ಮೆ ಬಾಡೂಟ ಹಾಕಿಸುವ ಪರಿಪಾಟ ಆರಂಭಿಸಿರುವ ಬೆನ್ನಲ್ಲೇ ನಗರದ ವಿವಿಧೆಡೆಯೂ ಟಿಕೆಟ್ ಆಕಾಂಕ್ಷಿಗಳು ಹಾಗೂ ಘೋಷಿತ ಅಭ್ಯರ್ಥಿಗಳು ಹಾಗೂ ಕೆಲವು ಹಾಲಿ ಶಾಸಕರು ಸೀರೆ, ಟಿ.ವಿ, ಕುಕ್ಕರ್ ಹಾಗೂ ಕೊಡೆ ವಿತರಿಸಿ ಮತದಾರರ ಸೆಳೆಯಲು ಮುಂದಾಗಿದ್ದಾರೆ.