ಡಿ.14ರಂದು ರಂಗಸಂಪದ ತಂಡದಿಂದ ‘ಲೋಕದ ಒಳಹೊರಗೆ’, ಡಿ.15ರಂದು ಸಮಾಜಮುಖಿ ತಂಡದಿಂದ ‘ಚಾವುಂಡರಾಯ’, ಡಿ.16ರಂದು ಅಭಿನಯ ತರಂಗ ತಂಡದಿಂದ ‘ಶಿವರುದ್ರಪ್ಪನ ಆಕಸ್ಮಿಕ ಸಾವು’, ಡಿ.18ರಂದು ಥೇಮ ತಂಡದಿಂದ ‘ಆ ಇ ಫ್ಯಾಮಿಲಿ’, ಡಿ.19ರಂದು ಅನೇಕ ತಂಡದಿಂದ ‘ಹನ್ನೆರಡು ಮೈನಸ್ ಒಂದು’, ಡಿ.20ರಂದು ಸಂಚಾರಿ ಥಿಯೇಟರ್ನಿಂದ ‘ಹುತ್ತವ ಬಡಿದರೆ’, ಡಿ.21ರಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದಿಂದ ‘ಗೋಕುಲ ನಿರ್ಗಮನ’ ಹಾಗೂ ಡಿ.22ರಂದು ಸಾಫಲ್ಯ ತಂಡದಿಂದ ‘ಅಡಿಗೆಭಟ್ಟ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಎಲ್ಲ ದಿನವೂ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.