‘ನಾನು ಡಿ.ಆರ್. ನಾಗರಾಜ್ ಅವರನ್ನು ಮೊದಲ ಬಾರಿಗೆ ಪಿ. ಲಂಕೇಶ್ ಅವರ ಕಚೇರಿಯಲ್ಲಿ ನೋಡಿದ್ದೆ. 1994ರಲ್ಲಿ ವಿಧಾನ ಸಭಾಧ್ಯಕ್ಷನಾಗಿದ್ದಾಗ ಬೆಂಗಳೂರು ವಕೀಲರ ಸಂಘವು ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ‘ಸೃಷ್ಟಿಯಲ್ಲಿ ಕಾಗದ ತಿನ್ನುವ ಪ್ರಾಣಿ ಕತ್ತೆ ಮಾತ್ರ. ಹಾಗಾಗಿ, ಹಣವನ್ನು ತಿನ್ನುವವರೆಲ್ಲ ಕತ್ತೆಗಳು’ ಎಂದು ಹೇಳಿದೆ. ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು. ಆಗ ದೂರವಾಣಿ ಕರೆ ಮಾಡಿದ ನಾಗರಾಜ್, ‘ರಾಜ್ಯದಲ್ಲಿ ಇಂತಹ ಕತ್ತೆಗಳು ಎಷ್ಟಿವೆ ಎಂದು ಅಂದಾಜಿದೆಯೇ ನಿಮಗೆ’ ಎಂದು ಪ್ರಶ್ನಿಸಿದ್ದರು. ಜಗತ್ತಿನ ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದ ಅವರು 46ನೇ ವಯಸ್ಸಿಗೆ ನಮ್ಮಿಂದ ದೂರವಾದರು’ ಎಂದು ಬೇಸರ ವ್ಯಕ್ತಪಡಿಸಿದರು.