ಅದರಲ್ಲೂ ಬೆಂಗಳೂರು ಪೂರ್ವದ ಸರ್ಜಾಪುರ, ಯಮಲೂರು, ಬೆಳಂದೂರು, ವರ್ತೂರು, ಹೊರವರ್ತುಲ ರಸ್ತೆ, ವೈಟ್ಫಿಲ್ಡ್ ಸೇರಿದಂತೆ ಇತರ ಜನಸಂದಣಿಯ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಆ ಪ್ರದೇಶಗಳಿಗೆ ಕಳೆದ ಒಂದು ವಾರದಿಂದ ಸೇವೆ ತಲುಪಿಸಲು ಇ–ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳಿಗೆ ಸಾಧ್ಯ ಆಗಿಲ್ಲ ಎಂದು ಅವು ಅಸಹಾಯಕತೆ ವ್ಯಕ್ತಪಡಿಸಿವೆ.