<p><strong>ಬೆಂಗಳೂರು:</strong> ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಅಮೆಜಾನ್, ಫ್ಲಿಫ್ಕಾರ್ಟ್ನಂತಹಇ–ಕಾಮರ್ಸ್ ಹಾಗೂ ಜೊಮಾಟೊ, ಸ್ವಿಗ್ಗಿ ಅಂತಹಫುಡ್ ಡೆಲಿವರಿ ಕಂಪನಿಗಳಿಗೆ ನಷ್ಟ ಆಗಿದೆ. ಅಲ್ಲದೇ ಡೆಲಿವರಿ ಬಾಯ್ಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.</p>.<p>ಅದರಲ್ಲೂ ಬೆಂಗಳೂರು ಪೂರ್ವದ ಸರ್ಜಾಪುರ, ಯಮಲೂರು, ಬೆಳಂದೂರು, ವರ್ತೂರು, ಹೊರವರ್ತುಲ ರಸ್ತೆ, ವೈಟ್ಫಿಲ್ಡ್ ಸೇರಿದಂತೆ ಇತರ ಜನಸಂದಣಿಯ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಆ ಪ್ರದೇಶಗಳಿಗೆ ಕಳೆದ ಒಂದು ವಾರದಿಂದ ಸೇವೆ ತಲುಪಿಸಲು ಇ–ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳಿಗೆ ಸಾಧ್ಯ ಆಗಿಲ್ಲ ಎಂದು ಅವು ಅಸಹಾಯಕತೆ ವ್ಯಕ್ತಪಡಿಸಿವೆ.</p>.<p>‘ಕಳೆದ ಮೂರು ದಿನದಿಂದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲ ಪ್ರದೇಶಗಳಿಗೆ ಸೇವೆ ನೀಡಲು ಸಾಧ್ಯವಾಗಿಲ್ಲ’ ಎಂದು ಪ್ರಮುಖ ಇ–ಕಾಮರ್ಸ್ ಕಂಪನಿಯೊಂದು ತಿಳಿಸಿದೆ.</p>.<p>‘ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಸೇವೆಯನ್ನು ಸದ್ಯ ನೀಡಲಾಗುತ್ತಿಲ್ಲ. ಏಕೆಂದರೆ, ನಮ್ಮ ಡೆಲಿವರಿ ಬಾಯ್ಗಳ ಸುರಕ್ಷತೆಯೇ ನಮಗೆ ಮುಖ್ಯ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ’ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.</p>.<p>‘ನೀರು ನುಗ್ಗಿರುವ ಪ್ರದೇಶಗಳಿಗೆ ಸೇವೆ ನೀಡಲಾಗಿಲ್ಲ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರವಾಹ ಪರಿಸ್ಥಿತಿಯಲ್ಲಿ ನಮ್ಮ ಗ್ರಾಹಕರಿಗೆ ಸೇವೆ ನೀಡದಿರುವುದಕ್ಕೆ ಕ್ಷಮೆ ಕೇಳುತ್ತೇವೆ’ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ.</p>.<p><a href="https://www.prajavani.net/entertainment/cinema/ranbir-kapoor-and-alia-bhatt-avoid-attending-sandhya-puja-at-ujjain-amid-protests-against-their-film-969990.html" itemprop="url">ಬ್ರಹ್ಮಾಸ್ತ್ರ: ಮಹಾಕಾಲ ದೇವಸ್ಥಾನದಸಂದ್ಯಾ ಪೂಜೆ ರದ್ದುಗೊಳಿಸಿದ ರಣಬೀರ್–ಆಲಿಯಾ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಅಮೆಜಾನ್, ಫ್ಲಿಫ್ಕಾರ್ಟ್ನಂತಹಇ–ಕಾಮರ್ಸ್ ಹಾಗೂ ಜೊಮಾಟೊ, ಸ್ವಿಗ್ಗಿ ಅಂತಹಫುಡ್ ಡೆಲಿವರಿ ಕಂಪನಿಗಳಿಗೆ ನಷ್ಟ ಆಗಿದೆ. ಅಲ್ಲದೇ ಡೆಲಿವರಿ ಬಾಯ್ಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.</p>.<p>ಅದರಲ್ಲೂ ಬೆಂಗಳೂರು ಪೂರ್ವದ ಸರ್ಜಾಪುರ, ಯಮಲೂರು, ಬೆಳಂದೂರು, ವರ್ತೂರು, ಹೊರವರ್ತುಲ ರಸ್ತೆ, ವೈಟ್ಫಿಲ್ಡ್ ಸೇರಿದಂತೆ ಇತರ ಜನಸಂದಣಿಯ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಆ ಪ್ರದೇಶಗಳಿಗೆ ಕಳೆದ ಒಂದು ವಾರದಿಂದ ಸೇವೆ ತಲುಪಿಸಲು ಇ–ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳಿಗೆ ಸಾಧ್ಯ ಆಗಿಲ್ಲ ಎಂದು ಅವು ಅಸಹಾಯಕತೆ ವ್ಯಕ್ತಪಡಿಸಿವೆ.</p>.<p>‘ಕಳೆದ ಮೂರು ದಿನದಿಂದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲ ಪ್ರದೇಶಗಳಿಗೆ ಸೇವೆ ನೀಡಲು ಸಾಧ್ಯವಾಗಿಲ್ಲ’ ಎಂದು ಪ್ರಮುಖ ಇ–ಕಾಮರ್ಸ್ ಕಂಪನಿಯೊಂದು ತಿಳಿಸಿದೆ.</p>.<p>‘ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಸೇವೆಯನ್ನು ಸದ್ಯ ನೀಡಲಾಗುತ್ತಿಲ್ಲ. ಏಕೆಂದರೆ, ನಮ್ಮ ಡೆಲಿವರಿ ಬಾಯ್ಗಳ ಸುರಕ್ಷತೆಯೇ ನಮಗೆ ಮುಖ್ಯ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ’ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.</p>.<p>‘ನೀರು ನುಗ್ಗಿರುವ ಪ್ರದೇಶಗಳಿಗೆ ಸೇವೆ ನೀಡಲಾಗಿಲ್ಲ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರವಾಹ ಪರಿಸ್ಥಿತಿಯಲ್ಲಿ ನಮ್ಮ ಗ್ರಾಹಕರಿಗೆ ಸೇವೆ ನೀಡದಿರುವುದಕ್ಕೆ ಕ್ಷಮೆ ಕೇಳುತ್ತೇವೆ’ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ.</p>.<p><a href="https://www.prajavani.net/entertainment/cinema/ranbir-kapoor-and-alia-bhatt-avoid-attending-sandhya-puja-at-ujjain-amid-protests-against-their-film-969990.html" itemprop="url">ಬ್ರಹ್ಮಾಸ್ತ್ರ: ಮಹಾಕಾಲ ದೇವಸ್ಥಾನದಸಂದ್ಯಾ ಪೂಜೆ ರದ್ದುಗೊಳಿಸಿದ ರಣಬೀರ್–ಆಲಿಯಾ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>