ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ‘ಕೀಟಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಇನ್ಸೆಕ್ಟ್ ಕೆಫೆ ಯೋಜನೆ ಸಹಕಾರಿಯಾಗಿದೆ. ಕೀಟಗಳ ಸಂತಾನೋತ್ಪತ್ತಿ ಮತ್ತು ಉಳಿವಿಗಾಗಿ ಸುರಕ್ಷಿತವಾದ ಗೂಡುಗಳಿಲ್ಲದ ಪರಿಣಾಮ ಅನೇಕ ಕೀಟಗಳು ಅಪಾಯದ ಅಂಚಿನಲ್ಲಿವೆ. ಆದ್ದರಿಂದ, ಇವುಗಳ ಸಂರಕ್ಷಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇನ್ಸೆಕ್ಟ್ ಕೆಫೆಗಳನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಖಾಲಿ ಸ್ಥಳಗಳಲ್ಲಿಯೂ ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.