<p><strong>ಬೆಂಗಳೂರು: </strong>ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಶೌಚ ಗುಂಡಿ ಅಗೆಯುತ್ತಿದ್ದ ವೇಳೆ ಹಾರೆಯಲ್ಲಿ ವಿದ್ಯುತ್ ಹರಿದು ಕಾರ್ಮಿಕ ಅಬುರಾಮ್ (22) ಎಂಬುವರು ಮೃತಪಟ್ಟಿದ್ದಾರೆ.</p>.<p>‘ಕೈಗೊಂಡ್ರಹಳ್ಳಿ ನಿವಾಸಿ ಅಬುರಾಮ್, ಸ್ನೇಹಿತ ಪ್ರಸನ್ನ ಜೊತೆ ಚಾಂದ್ ಪಾಷಾ ಎಂಬುವರ ಮನೆಯ ಶೌಚ ಗುಂಡಿ ಅಗೆಯಲು ಹೋಗಿದ್ದ ವೇಳೆ ಈ ಅವಘಡ ನಡೆದಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಮನೆ ಮಾಲೀಕ ಚಾಂದ್ ಪಾಷಾ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗುಂಡಿ ಅಗೆಯುವಾಗ ಹಾರೆಯಲ್ಲಿ ವಿದ್ಯುತ್ ಹರಿದು ಅಬುರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಚಾಂದ್ ಪಾಷಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.</p>.<p class="Briefhead">ಸ್ಕ್ರೂಡ್ರೈವರ್ನಿಂದ ಇರಿದು ಕೊಲೆಗೆ ಯತ್ನ</p>.<p>ಬೆಂಗಳೂರು: ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಾಜಿಯಾ (32) ಎಂಬುವರನ್ನು ಕೈ ಕಾಲು ಕಟ್ಟಿಹಾಕಿ ಸ್ಕ್ರೂಡ್ರೈವರ್ನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಅವರ ಪತಿ ಸಲೀಂ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>‘ಕೆಲ ವರ್ಷಗಳ ಹಿಂದೆ ನಾಜಿಯಾ ಹಾಗೂ ಸಲೀಂ ಮದುವೆ ಆಗಿತ್ತು. ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಘಟನೆ ಸಂಬಂಧ ಮನೆಯ ಮಾಲೀಕರೇ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿದ್ದ ಸಲೀಂ ಮನೆಯಲ್ಲಿ ಜಗಳ ಮಾಡಲಾರಂಭಿಸಿದ್ದ. ಇದೇ 23ರಂದು ರಾತ್ರಿ ಪತ್ನಿಯ ಕೈ–ಕಾಲು ಕಟ್ಟಿ ಹಾಕಿ ಸ್ಕ್ರೂಡ್ರೈವರ್ನಿಂದ ದೇಹಕ್ಕೆ ಇರಿಯುತ್ತಿದ್ದ. ಗಾಯವಾಗಿ ಮಹಿಳೆಯ ದೇಹದಿಂದ ರಕ್ತ ಸೋರುತ್ತಿತ್ತು’</p>.<p>‘ಕೂಗಾಟ ಕೇಳಿ ಮನೆಗೆ ಹೋಗಿದ್ದ ಮಾಲೀಕರು, ನಾಜಿಯಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ವಿವರಿಸಿದರು.</p>.<p class="Briefhead">ಗುಂಡು ಹಾರಿಸಿ ಯುವತಿ ಹತ್ಯೆ ಯತ್ನ</p>.<p>ಬೆಂಗಳೂರು: ನಾಡಪಿಸ್ತೂಲ್ನಿಂದ ಗುಂಡು ಹಾರಿಸಿ 25 ವರ್ಷದ ಯುವತಿಯ ಹತ್ಯೆಗೆ ಯತ್ನಿಸಿದ ಘಟನೆ ಮಾರತ್ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಬಡಾವಣೆಯ ಮುನ್ನೇನ ಕೊಳಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.</p>.<p>ಒಡಿಶಾದ ಯುವತಿ ನಿಮ್ಹಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ನಗರದಲ್ಲಿದ್ದಾರೆ. ಇವರು ತಂಗಿರುವ ‘ಪೇಯಿಂಗ್ ಗೆಸ್ಟ್’ (ಪಿ.ಜಿ) ಮುಂಭಾಗದಲ್ಲೇ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ಆರೋಪಿಪರಾರಿಯಾಗಿದ್ದಾನೆ.</p>.<p>7.65ಎಂ.ಎಂ ನಾಡ ಪಿಸ್ತೂಲ್ನಿಂದ ಒಂದು ಸುತ್ತು ಗುಂಡು ಹಾರಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದಿಂದ ಗುಂಡು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.</p>.<p>ಆರೋಪಿ ಹಾಗೂ ಯುವತಿ ಪರಸ್ಪರ ಪರಿಚಯವಿದ್ದು, ಪ್ರೇಮ ಪ್ರಕರಣ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಆರೋಪಿ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.</p>.<p class="Briefhead">ಅತ್ತೆಯ ಹತ್ಯೆ: ಸೊಸೆ, ಪ್ರಿಯಕರ ಬಂಧನ</p>.<p>ಬೆಂಗಳೂರು: ಫೆ.18ರಂದು ಬ್ಯಾಟರಾಯನಪುರದಲ್ಲಿ ನಡೆದ ರಾಜಮ್ಮ (60) ಎಂಬವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜಮ್ಮ ಅವರ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.</p>.<p>ಅನೈತಿಕ ಸಂಬಂಧ ಗಂಡನಿಗೆ ತಿಳಿಸಬಹುದು ಎಂದು ಭೀತಿಯಿಂದ ರಾಜಮ್ಮ ಅವರನ್ನು ಸೊಸೆ ಸೌಂದರ್ಯಾ ಮತ್ತು ಆಕೆಯ ಪ್ರಿಯಕರ ನವೀನ ಅಲಿಯಾಸ್ ಜಡೇಸ್ವಾಮಿ ಕೊಲೆ ಮಾಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<p>ಬ್ಯಾಟರಾಯನಪುರ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ರಾಜಮ್ಮ ಅವರನ್ನು ಎಲೆ ಅಡಿಕೆ ಕುಟ್ಟುವ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪತಿ ಕುಮಾರ್ಗೆ ಸೌಂದರ್ಯಾ ಕಥೆ ಕಟ್ಟಿ<br />ಹೇಳಿದ್ದಳು. ಇದನ್ನು ನಂಬಿದ್ದ ಕುಮಾರ್, ಆಕೆಯ ಹೇಳಿಕೆಯಂತೆ ದೂರು ನೀಡಿದ್ದರು.</p>.<p>‘ಸೌಂದರ್ಯಾಳನ್ನು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದ್ದಳು. ತೀವ್ರವಾಗಿ ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾಳೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.</p>.<p class="Briefhead">ಅಪಘಾತ: ಸಾವು</p>.<p>ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಜಾವಳಿ ಸಮೀಪದ ಕೆಳಗೂರಿನಲ್ಲಿ ಆಮ್ನಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.</p>.<p>ಬೆಂಗಳೂರಿನ ರಾಜಾಜಿನಗರದ ದಿನಕರ (28) ಮೃತರು. ಸ್ಕೂಟರ್ ಸಹಸವಾರ ಬೆಂಗಳೂರಿನ ಬಾಣವಾಡಿಯ ಗಂಗರಾಜು (31) ತೀವ್ರ ಗಾಯಗೊಂಡಿದ್ದು, ಮೂಡಿಗೆರೆ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರಿಗೆ ಕರೆದ್ಯೊಯಲಾಗಿದೆ.</p>.<p>ಯುವಕರು ಬೆಂಗಳೂರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead">ಬ್ಯೂಟಿ ಪಾರ್ಲರ್ನಲ್ಲಿ ಕಳವು!</p>.<p>ಬೆಂಗಳೂರು: ಟಿ.ಸಿ ಪಾಳ್ಯದ ಗ್ರೀನ್ಸ್ ಟೀನ್ಸ್ ಪಾರ್ಲರ್ಗೆ ಸೌಂದರ್ಯ ವರ್ಧನೆಗಾಗಿ ಬಂದಿದ್ದ ಮಹಿಳೆಯೊಬ್ಬರ 206 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಲಾಗಿದೆ.</p>.<p>ಆಶಾರಾಣಿ ಎಂಬುವವರು ನೀಡಿರುವ ದೂರಿನಲ್ಲಿ, ‘ಕಿತ್ತಗನೂರು ಆಂಧ್ರ ಬ್ಯಾಂಕ್ನ ಲಾಕರ್ನಲ್ಲಿ ಇಡಲಾಗಿದ್ದ ₹ 6 ಲಕ್ಷ ಮೌಲ್ಯದ ಆಭರಣಗಳನ್ನು ಇದೇ 20ರಂದು ಬಿಡಿಸಿಕೊಂಡು ಗ್ರೀನ್ ಟೀನ್ಸ್ ಪಾರ್ಲರ್ಗೆ ಸೌಂದರ್ಯ ವರ್ಧನೆಗಾಗಿ ಹೋಗಿದ್ದೆ. ಹರಿಣಿ ಎಂಬುವರು ಫೇಶಿಯಲ್ ಮಾಡಿದ ಬಳಿಕ ಕೂದಲಿಗೆ ಬಣ್ಣ ಹಚ್ಚಲು ಬೇರೊಂದು ಸ್ಥಳಕ್ಕೆ ಕರೆದೊಯ್ದರು’ ಎಂದು ತಿಳಿಸಿದ್ದಾರೆ.</p>.<p>‘ಆ ಸಮಯದಲ್ಲಿ ತಾವು ತಂದಿದ್ದ ಬ್ಯಾಗ್ನಲ್ಲಿ ಚಿನ್ನ ಹಾಗೂ ಹಣ ಇಟ್ಟಿರುವುದಾಗಿ ತಿಳಿಸಿದ್ದೆ. ಈ ಮಧ್ಯೆ ಪದ್ಮಾ ಮತ್ತು ಯಶೋಧಾ ಅವರು ಫೇಶಿಯಲ್ ಮಾಡಿದ ಜಾಗವನ್ನು ಕ್ಲೀನ್ ಮಾಡಲು ಹೋಗಿದ್ದರು. 30 ನಿಮಿಷಗಳ ತರುವಾಯ ನೋಡಿದಾಗ ಆಭರಣವಿದ್ದ ಪೆಟ್ಟಿಗೆ ನಾಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಪಾರ್ಲರ್ ವ್ಯವಸ್ಥಾಪಕಿ, ಹರಿಣಿ, ಪದ್ಮಾ ಮತ್ತು ಯಶೋಧಾ ಉತ್ತರಿಸಲಿಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಶೌಚ ಗುಂಡಿ ಅಗೆಯುತ್ತಿದ್ದ ವೇಳೆ ಹಾರೆಯಲ್ಲಿ ವಿದ್ಯುತ್ ಹರಿದು ಕಾರ್ಮಿಕ ಅಬುರಾಮ್ (22) ಎಂಬುವರು ಮೃತಪಟ್ಟಿದ್ದಾರೆ.</p>.<p>‘ಕೈಗೊಂಡ್ರಹಳ್ಳಿ ನಿವಾಸಿ ಅಬುರಾಮ್, ಸ್ನೇಹಿತ ಪ್ರಸನ್ನ ಜೊತೆ ಚಾಂದ್ ಪಾಷಾ ಎಂಬುವರ ಮನೆಯ ಶೌಚ ಗುಂಡಿ ಅಗೆಯಲು ಹೋಗಿದ್ದ ವೇಳೆ ಈ ಅವಘಡ ನಡೆದಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಮನೆ ಮಾಲೀಕ ಚಾಂದ್ ಪಾಷಾ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗುಂಡಿ ಅಗೆಯುವಾಗ ಹಾರೆಯಲ್ಲಿ ವಿದ್ಯುತ್ ಹರಿದು ಅಬುರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಚಾಂದ್ ಪಾಷಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.</p>.<p class="Briefhead">ಸ್ಕ್ರೂಡ್ರೈವರ್ನಿಂದ ಇರಿದು ಕೊಲೆಗೆ ಯತ್ನ</p>.<p>ಬೆಂಗಳೂರು: ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಾಜಿಯಾ (32) ಎಂಬುವರನ್ನು ಕೈ ಕಾಲು ಕಟ್ಟಿಹಾಕಿ ಸ್ಕ್ರೂಡ್ರೈವರ್ನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಅವರ ಪತಿ ಸಲೀಂ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.</p>.<p>‘ಕೆಲ ವರ್ಷಗಳ ಹಿಂದೆ ನಾಜಿಯಾ ಹಾಗೂ ಸಲೀಂ ಮದುವೆ ಆಗಿತ್ತು. ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಘಟನೆ ಸಂಬಂಧ ಮನೆಯ ಮಾಲೀಕರೇ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿದ್ದ ಸಲೀಂ ಮನೆಯಲ್ಲಿ ಜಗಳ ಮಾಡಲಾರಂಭಿಸಿದ್ದ. ಇದೇ 23ರಂದು ರಾತ್ರಿ ಪತ್ನಿಯ ಕೈ–ಕಾಲು ಕಟ್ಟಿ ಹಾಕಿ ಸ್ಕ್ರೂಡ್ರೈವರ್ನಿಂದ ದೇಹಕ್ಕೆ ಇರಿಯುತ್ತಿದ್ದ. ಗಾಯವಾಗಿ ಮಹಿಳೆಯ ದೇಹದಿಂದ ರಕ್ತ ಸೋರುತ್ತಿತ್ತು’</p>.<p>‘ಕೂಗಾಟ ಕೇಳಿ ಮನೆಗೆ ಹೋಗಿದ್ದ ಮಾಲೀಕರು, ನಾಜಿಯಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ವಿವರಿಸಿದರು.</p>.<p class="Briefhead">ಗುಂಡು ಹಾರಿಸಿ ಯುವತಿ ಹತ್ಯೆ ಯತ್ನ</p>.<p>ಬೆಂಗಳೂರು: ನಾಡಪಿಸ್ತೂಲ್ನಿಂದ ಗುಂಡು ಹಾರಿಸಿ 25 ವರ್ಷದ ಯುವತಿಯ ಹತ್ಯೆಗೆ ಯತ್ನಿಸಿದ ಘಟನೆ ಮಾರತ್ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಬಡಾವಣೆಯ ಮುನ್ನೇನ ಕೊಳಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.</p>.<p>ಒಡಿಶಾದ ಯುವತಿ ನಿಮ್ಹಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ನಗರದಲ್ಲಿದ್ದಾರೆ. ಇವರು ತಂಗಿರುವ ‘ಪೇಯಿಂಗ್ ಗೆಸ್ಟ್’ (ಪಿ.ಜಿ) ಮುಂಭಾಗದಲ್ಲೇ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ಆರೋಪಿಪರಾರಿಯಾಗಿದ್ದಾನೆ.</p>.<p>7.65ಎಂ.ಎಂ ನಾಡ ಪಿಸ್ತೂಲ್ನಿಂದ ಒಂದು ಸುತ್ತು ಗುಂಡು ಹಾರಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದಿಂದ ಗುಂಡು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.</p>.<p>ಆರೋಪಿ ಹಾಗೂ ಯುವತಿ ಪರಸ್ಪರ ಪರಿಚಯವಿದ್ದು, ಪ್ರೇಮ ಪ್ರಕರಣ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಆರೋಪಿ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.</p>.<p class="Briefhead">ಅತ್ತೆಯ ಹತ್ಯೆ: ಸೊಸೆ, ಪ್ರಿಯಕರ ಬಂಧನ</p>.<p>ಬೆಂಗಳೂರು: ಫೆ.18ರಂದು ಬ್ಯಾಟರಾಯನಪುರದಲ್ಲಿ ನಡೆದ ರಾಜಮ್ಮ (60) ಎಂಬವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜಮ್ಮ ಅವರ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.</p>.<p>ಅನೈತಿಕ ಸಂಬಂಧ ಗಂಡನಿಗೆ ತಿಳಿಸಬಹುದು ಎಂದು ಭೀತಿಯಿಂದ ರಾಜಮ್ಮ ಅವರನ್ನು ಸೊಸೆ ಸೌಂದರ್ಯಾ ಮತ್ತು ಆಕೆಯ ಪ್ರಿಯಕರ ನವೀನ ಅಲಿಯಾಸ್ ಜಡೇಸ್ವಾಮಿ ಕೊಲೆ ಮಾಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.</p>.<p>ಬ್ಯಾಟರಾಯನಪುರ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ರಾಜಮ್ಮ ಅವರನ್ನು ಎಲೆ ಅಡಿಕೆ ಕುಟ್ಟುವ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪತಿ ಕುಮಾರ್ಗೆ ಸೌಂದರ್ಯಾ ಕಥೆ ಕಟ್ಟಿ<br />ಹೇಳಿದ್ದಳು. ಇದನ್ನು ನಂಬಿದ್ದ ಕುಮಾರ್, ಆಕೆಯ ಹೇಳಿಕೆಯಂತೆ ದೂರು ನೀಡಿದ್ದರು.</p>.<p>‘ಸೌಂದರ್ಯಾಳನ್ನು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದ್ದಳು. ತೀವ್ರವಾಗಿ ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾಳೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.</p>.<p class="Briefhead">ಅಪಘಾತ: ಸಾವು</p>.<p>ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಜಾವಳಿ ಸಮೀಪದ ಕೆಳಗೂರಿನಲ್ಲಿ ಆಮ್ನಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.</p>.<p>ಬೆಂಗಳೂರಿನ ರಾಜಾಜಿನಗರದ ದಿನಕರ (28) ಮೃತರು. ಸ್ಕೂಟರ್ ಸಹಸವಾರ ಬೆಂಗಳೂರಿನ ಬಾಣವಾಡಿಯ ಗಂಗರಾಜು (31) ತೀವ್ರ ಗಾಯಗೊಂಡಿದ್ದು, ಮೂಡಿಗೆರೆ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರಿಗೆ ಕರೆದ್ಯೊಯಲಾಗಿದೆ.</p>.<p>ಯುವಕರು ಬೆಂಗಳೂರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead">ಬ್ಯೂಟಿ ಪಾರ್ಲರ್ನಲ್ಲಿ ಕಳವು!</p>.<p>ಬೆಂಗಳೂರು: ಟಿ.ಸಿ ಪಾಳ್ಯದ ಗ್ರೀನ್ಸ್ ಟೀನ್ಸ್ ಪಾರ್ಲರ್ಗೆ ಸೌಂದರ್ಯ ವರ್ಧನೆಗಾಗಿ ಬಂದಿದ್ದ ಮಹಿಳೆಯೊಬ್ಬರ 206 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಲಾಗಿದೆ.</p>.<p>ಆಶಾರಾಣಿ ಎಂಬುವವರು ನೀಡಿರುವ ದೂರಿನಲ್ಲಿ, ‘ಕಿತ್ತಗನೂರು ಆಂಧ್ರ ಬ್ಯಾಂಕ್ನ ಲಾಕರ್ನಲ್ಲಿ ಇಡಲಾಗಿದ್ದ ₹ 6 ಲಕ್ಷ ಮೌಲ್ಯದ ಆಭರಣಗಳನ್ನು ಇದೇ 20ರಂದು ಬಿಡಿಸಿಕೊಂಡು ಗ್ರೀನ್ ಟೀನ್ಸ್ ಪಾರ್ಲರ್ಗೆ ಸೌಂದರ್ಯ ವರ್ಧನೆಗಾಗಿ ಹೋಗಿದ್ದೆ. ಹರಿಣಿ ಎಂಬುವರು ಫೇಶಿಯಲ್ ಮಾಡಿದ ಬಳಿಕ ಕೂದಲಿಗೆ ಬಣ್ಣ ಹಚ್ಚಲು ಬೇರೊಂದು ಸ್ಥಳಕ್ಕೆ ಕರೆದೊಯ್ದರು’ ಎಂದು ತಿಳಿಸಿದ್ದಾರೆ.</p>.<p>‘ಆ ಸಮಯದಲ್ಲಿ ತಾವು ತಂದಿದ್ದ ಬ್ಯಾಗ್ನಲ್ಲಿ ಚಿನ್ನ ಹಾಗೂ ಹಣ ಇಟ್ಟಿರುವುದಾಗಿ ತಿಳಿಸಿದ್ದೆ. ಈ ಮಧ್ಯೆ ಪದ್ಮಾ ಮತ್ತು ಯಶೋಧಾ ಅವರು ಫೇಶಿಯಲ್ ಮಾಡಿದ ಜಾಗವನ್ನು ಕ್ಲೀನ್ ಮಾಡಲು ಹೋಗಿದ್ದರು. 30 ನಿಮಿಷಗಳ ತರುವಾಯ ನೋಡಿದಾಗ ಆಭರಣವಿದ್ದ ಪೆಟ್ಟಿಗೆ ನಾಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಪಾರ್ಲರ್ ವ್ಯವಸ್ಥಾಪಕಿ, ಹರಿಣಿ, ಪದ್ಮಾ ಮತ್ತು ಯಶೋಧಾ ಉತ್ತರಿಸಲಿಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>