ಬೆಂಗಳೂರು ದಕ್ಷಿಣ ತಾಲ್ಲೂಕಿನ 14 ಗುಂಟೆ ಸರ್ಕಾರಿ ಖರಾಬು, 1–32 ಎಕರೆ ಸರ್ಕಾರಿ ಗೋಮಾಳ, 1 ಎಕರೆ ಗುಂಡುತೋಪು ವಶಕ್ಕೆ ಪಡೆಯಲಾಗಿದೆ. ಪೂರ್ವ ತಾಲ್ಲೂಕಿನಲ್ಲಿ 6 ಗುಂಟೆ ಸರ್ಕಾರಿ ಖರಾಬು, 9 ಗುಂಟೆ ಗೋಮಾಳ, 5 ಗುಂಟೆ ಗುಂಡುತೋಪು ಜಾಗ ವಶಕ್ಕೆ ಪಡೆಯಲಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ 1–12 ಎಕರೆ ಕರಾಬು ಜಾಗ, ಸ್ಮಶಾನದ3 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ. ಯಲಹಂಕ ತಾಲ್ಲೂಕಿನಲ್ಲಿ 3 ಕಡೆ 4–01 ಎಕರೆ ಗುಂಡುತೋಪು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.