‘ದೂರುದಾರರನ್ನು ಫೇಸ್ಬುಕ್ನಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿ, ಹಲವು ದಿನ ಮಾತುಕತೆ ನಡೆಸಿದ್ದ. ವ್ಯಕ್ತಿಗೆ ಕೆಲಸದ ಆಮಿಷವೊಡ್ಡಿದ್ದ ಆರೋಪಿ, ‘ನಾನು ದಾವಣಗೆರೆ ಶಾಸಕರೊಬ್ಬರ ಗನ್ಮ್ಯಾನ್. ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ನನಗೆ ಬಹಳ ಪರಿಚಯ. ಅವರ ಮೂಲಕ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದೇನೆ. ಆದರೆ, ಅದಕ್ಕೆ ಹಣ ಖರ್ಚಾಗುತ್ತದೆ’ ಎಂದಿದ್ದ.’