<p><strong>ಬೆಂಗಳೂರು: </strong>ಅಸಲಿ ನೋಟುಗಳನ್ನು ಹೋಲುವ ರೀತಿಯಲ್ಲಿ ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ಚಲಾವಣೆ ಮಾಡಲು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ತಮಿಳುನಾಡಿನ ಸುಮನ್ (36), ದೇವರಾಜನ್ (31) ಮತ್ತು ಮುನಿಶೇಖರ್ (29) ಬಂಧಿತರು. ಅವರಿಂದ ₹2 ಸಾವಿರ ಮುಖಬೆಲೆಯ 389 ಖೋಟಾ ನೋಟುಗಳನ್ನು ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಗುರುವಾರ ಸಂಜೆ 6 ಗಂಟೆಗೆ ಆರೋಪಿಗಳು ಕಾರಿನಲ್ಲಿ ಬಿಟಿಎಂ ಲೇಔಟ್ನಿಂದ ಹೊರಟಿದ್ದರು. ಮಾಸ್ಕ್ ಧರಿಸಿರಲಿಲ್ಲ. ಕರ್ತವ್ಯದಲ್ಲಿದ್ದ ಪಿಎಸ್ಐ ರಾಜ್ಕುಮಾರ್ ಜೋಡಟ್ಟಿ ಮತ್ತು ಹೆಡ್ ಕಾನ್ಸ್ಟೆಬಲ್ ಪ್ರಮೋದ್, ಕಾರನ್ನು ತಡೆದು ಮಾಸ್ಕ್ ಪರಿಶೀಲನೆ ನಡೆಸಿದ್ದರು. ಅದೇ ವೇಳೆಯೇ ಕಾರಿನಲ್ಲಿ ಖೋಟಾ ನೋಟುಗಳ ಕಂತೆ ಕಂಡಿತ್ತು’ ಎಂದೂ ಅವರು ಹೇಳಿದರು.</p>.<p>‘ತಮಿಳುನಾಡಿನಲ್ಲಿ ಜೆರಾಕ್ಸ್ ಮೂಲಕ ಖೋಟಾ ನೋಟು ತಯಾರಿಸುತ್ತಿದ್ದ ಆರೋಪಿಗಳು, ನಗರಕ್ಕೆ ತಂದು ಚಲಾವಣೆ ಮಾಡುತ್ತಿದ್ದರು. ಸದ್ಯ ಜಪ್ತಿ ಮಾಡಿರುವ ನೋಟುಗಳನ್ನು ಆರೋಪಿಗಳು ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿಲ್ಲ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಸಲಿ ನೋಟುಗಳನ್ನು ಹೋಲುವ ರೀತಿಯಲ್ಲಿ ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ಚಲಾವಣೆ ಮಾಡಲು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ತಮಿಳುನಾಡಿನ ಸುಮನ್ (36), ದೇವರಾಜನ್ (31) ಮತ್ತು ಮುನಿಶೇಖರ್ (29) ಬಂಧಿತರು. ಅವರಿಂದ ₹2 ಸಾವಿರ ಮುಖಬೆಲೆಯ 389 ಖೋಟಾ ನೋಟುಗಳನ್ನು ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಗುರುವಾರ ಸಂಜೆ 6 ಗಂಟೆಗೆ ಆರೋಪಿಗಳು ಕಾರಿನಲ್ಲಿ ಬಿಟಿಎಂ ಲೇಔಟ್ನಿಂದ ಹೊರಟಿದ್ದರು. ಮಾಸ್ಕ್ ಧರಿಸಿರಲಿಲ್ಲ. ಕರ್ತವ್ಯದಲ್ಲಿದ್ದ ಪಿಎಸ್ಐ ರಾಜ್ಕುಮಾರ್ ಜೋಡಟ್ಟಿ ಮತ್ತು ಹೆಡ್ ಕಾನ್ಸ್ಟೆಬಲ್ ಪ್ರಮೋದ್, ಕಾರನ್ನು ತಡೆದು ಮಾಸ್ಕ್ ಪರಿಶೀಲನೆ ನಡೆಸಿದ್ದರು. ಅದೇ ವೇಳೆಯೇ ಕಾರಿನಲ್ಲಿ ಖೋಟಾ ನೋಟುಗಳ ಕಂತೆ ಕಂಡಿತ್ತು’ ಎಂದೂ ಅವರು ಹೇಳಿದರು.</p>.<p>‘ತಮಿಳುನಾಡಿನಲ್ಲಿ ಜೆರಾಕ್ಸ್ ಮೂಲಕ ಖೋಟಾ ನೋಟು ತಯಾರಿಸುತ್ತಿದ್ದ ಆರೋಪಿಗಳು, ನಗರಕ್ಕೆ ತಂದು ಚಲಾವಣೆ ಮಾಡುತ್ತಿದ್ದರು. ಸದ್ಯ ಜಪ್ತಿ ಮಾಡಿರುವ ನೋಟುಗಳನ್ನು ಆರೋಪಿಗಳು ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿಲ್ಲ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>