2023ರ ನವೆಂಬರ್ ತಿಂಗಳಿನಿಂದ ಆರ್.ಆರ್.ನಗರ ಕಚೇರಿಯಲ್ಲಿ, ಆಸ್ತಿ ವಹಿಗಳನ್ನು ಕಂಪ್ಯೂಟರೀಕರಣ ಮಾಡಲು ಸ್ಕ್ಯಾನ್ ಮಾಡಲಾಗುತ್ತಿತ್ತು. ಹಲಗೆವಡೇರಹಳ್ಳಿ, ಗ್ರಾಮಕ್ಕೆ ಸಂಬಂಧಿಸಿದ ‘ಎ’ ಖಾತಾ ವಹಿ ಪುಸ್ತಕವನ್ನು ಸ್ಕ್ಯಾನ್ ಮಾಡುವಾಗ ವ್ಯಾಲ್ಯೂಮ್ ನಂ. 38ರ ‘ಎ’ ಖಾತಾ ಪುಸ್ತಕದ ಪುಟ ಸಂಖ್ಯೆ 122ರಲ್ಲಿ ಕ್ರಮ ಸಂಖ್ಯೆ 7362ರಲ್ಲಿ ಯಾವುದೇ ಹೆಸರು ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರಥಮ ದರ್ಜೆ ಸಹಾಯಕರಾಗಿರುವ ವಿಷಯ ನಿರ್ವಾಹಕ ಓಂಕಾರಮೂರ್ತಿ ಖಾಲಿ ಇದ್ದ ಸ್ಥಳದಲ್ಲಿ 66/1 ಹಾಗೂ 9/5 ಎಂಬ, 40*60 ಅಳತೆಯ ನಿವೇಶನದ ವಿವರ ಹಾಗೂ ಅದರ ಆಸ್ತಿ ಮಾಲೀಕ ಯತಿನ್ ಗೌತಮ್ ವಿ. ಎಂದು ನಮೂದಿಸಿದ್ದರು. ಫೆ.12ರಂದು ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್ ಪರಿಶೀಲನೆ ನಡೆಸಿದಾಗ ಈ ಅಕ್ರಮ ಗಮನಕ್ಕೆ ಬಂದಿದೆ.