‘ನಗರದಲ್ಲಿ ಕೆಲವು ಕಡೆ ಒಂದು ಎಕರೆಗೆ ₹3 ಕೋಟಿಯಿಂದ ₹5 ಕೋಟಿಯವರೆಗೆ ಇದೆ. ಇಂತಹ ಅಮೂಲ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ತೆರವು ಮಾಡುವ ಸಂದರ್ಭದಲ್ಲಿ ರಾಜಕೀಯ ಒತ್ತಡಗಳೂ ಬಂದವು. ಆದರೆ, ಕಾನೂನು ಪ್ರಕಾರವಾಗಿ, ನ್ಯಾಯಾಲಯದ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದ್ದರಿಂದ ಹೆಚ್ಚು ತೊಂದರೆ ಎದುರಾಗಲಿಲ್ಲ’ ಎಂದು ಅವರು ಹೇಳಿದರು.