ಶ್ರೀನಿವಾಸ್ ಹಾಗೂ ವಡಿವೇಲು ಅವರು 2020ರ ಜುಲೈನಿಂದ ಡಿಸೆಂಬರ್ವರೆಗೆ ಬಿಲ್ ಸಲ್ಲಿಸುವ ಸಂದರ್ಭದಲ್ಲಿ ಹಾಜರಾತಿ ಪುಸ್ತಕಕ್ಕೆ ಎಇಇ ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉದಯ್ಕುಮಾರ್ ಅವರನ್ನು ಸಹಿ ದೃಢೀಕರಣಕ್ಕೆ ಮಾಹಿತಿ ಕೇಳಲಾಗಿದೆ. ಅವರು ಸಹಿ ತಮ್ಮದಲ್ಲ, ನಕಲು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಇದರಂತೆ ಜಂಟಿ ಆಯುಕ್ತರು ಕ್ರಿಮಿನಲ್ ಪ್ರಕರಣ ದಾಖಲಿಸಲು ಪಶ್ಚಿಮ ವಲಯದ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ವಪ್ನ ಹಾಗೂ ಅಧೀಕ್ಷಕ ಎಂಜಿನಿಯರ್ ಸ್ವಯಂಪ್ರಭ ಅವರಿಗೆ 2021ರ ಅ.10ರಂದು ಸೂಚಿಸಿದ್ದಾರೆ. ಅವರು ತಡೆ ಮಾಡಿದ್ದು, ಅವರಿಗೆ ಮತ್ತೆ ಆ.3ರಂದು ನೋಟಿಸ್ ಜಾರಿ ಮಾಡಲಾಗಿದೆ. ನಂತರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.