ಮಂಜುನಾಥ ಪ್ರಸಾದ್, ‘ಒಣ ಕಸ ವಿಲೇವಾರಿಯ ಹೊಣೆಯನ್ನು ಈ ಹಿಂದೆ ಕಸ ಆಯುವ ಕಾಯಕದಲ್ಲಿ ತೊಡಗಿದ್ದವರಿಗೆ ಹಾಗೂ ಮತ್ತು ಸ್ವ-ಸಹಾಯ ಗುಂಪುಗಳಿಗೆ ವಹಿಸಲಾಗಿವೆ. ಅವರು ವಾರದಲ್ಲಿ ಎರಡು ಬಾರಿ ಒಣಕಸ ಸಂಗ್ರಹಿಸಲಿದ್ದಾರೆ. ನಗರದಲ್ಲಿ ಸುಮಾರು 7,500 ಮಂದಿ ಕಸ ಆಯುವ ಕಾಯಕದಲ್ಲಿ ತೊಡಗಿದವರಿದ್ದಾರೆ. ಅವರು ಬದುಕು ರೂಪಿಸಿಕೊಳ್ಳಲು ಇದು ಸಹಕಾರಿ’ ಎಂದರು.