<p><strong>ಬೆಂಗಳೂರು: </strong>'ಮಹಾತ್ಮ ಗಾಂಧೀಜಿ ಅವರನ್ನು ಆರ್ಎಸ್ಎಸ್ ಮೂಲದವರೇಹತ್ಯೆ ಮಾಡಿದ್ದಾರೆ' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಸರ್ವೋದಯ ದಿನಾಚರಣೆ, ಕಾಲೇಜು ಪ್ರಾಧ್ಯಾಪಕರಿಗಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ಗಾಂಧಿ ಹಂತಕ ಗೋಡ್ಸೆ, ಗಾಂಧಿಯನ್ನು ಹತ್ಯೆಗೈಯುವ 15ದಿನಗಳಿಗಿಂತ ಮೊದಲುಬೆಂಗಳೂರಿಗೆ ಬಂದಾಗ ಆರ್ಎಸ್ಎಸ್ ಸಂಘಟಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರೆಂದರೆ ಇದು ಸಂಘ ಪರಿವಾರದ ಕೃತ್ಯವಲ್ಲವೇ? ' ಎಂದು ಪ್ರಶ್ನಿಸಿದರು.</p>.<p>'ಆದರೆ, ಸಂಘ ಪರಿವಾರ ಗೋಡ್ಸೆ ನಮ್ಮವನಲ್ಲ ಎಂದು ಹೇಳುತ್ತಿದೆ. ಬಿಜೆಪಿಯವರು ಹಲಕಾ ಕೆಲಸ ಮಾಡುತ್ತಿದ್ದಾರೆ' ಎಂದು ದೂರಿದರು.</p>.<p>'ಸರ್ಕಾರ ನಾಚಿಕೆಗೇಡಿ ಕೆಲಸ ಮಾಡುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ ಹೊರಟು ಬಂದವರಿಗೆ ಸಾಂತ್ವನ, ಭರವಸೆ ಹೇಳದೆ 'ಅಧಿಕಾರದಲ್ಲಿ ನಾನಿದ್ದಾಗಲೇ ಹೋರಾಟ ಮಾಡಬೇಕಿತ್ತಾ' ಎಂದು ಪ್ರಶ್ನಿಸುವ ರೀತಿ ಅವರಿಗೆ ಶೋಭೆ ತರುವಂಥದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>'ಗಾಂಧಿ ಹತ್ಯೆ ಇಂದಿಗೂ ನೋವುಂಟು ಮಾಡುತ್ತಿದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೋಮುವಾದ, ಹಿಂಸಾತ್ಮಕ ಮನಸ್ಸುಗಳನ್ನು ಖಂಡಿಸಬೇಕು' ಎಂದು ವೊಡೇ ಪಿ.ಕೃಷ್ಣ ಹೇಳಿದರು.</p>.<p>ವೇಮುಗಲ್ ಸೋಮಶೇಖರ್ ವಿರಚಿತ 'ಮಹದೇವ ದೇಸಾಯಿ', ಗಾಂಧೀಜಿ ಅವರ 'ಖಾದಿ ಗ್ರಾಮೋದ್ಯೋಗ', ಹಾಸ್ಯ ಮತ್ತು ಗಾಂಧಿ ಸೇರಿದಂತೆ 8ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ನಡೆದಾಡುವ ಮಹಾತ್ಮ ಗಾಂಧಿ- ವೇಮಗಲ್ ಸೋಮಶೇಖರ್, ಹಿರಿಯ ಕರಡು ತಿದ್ದುಪಡಿಗಾರ ಎಸ್.ಕೆ.ಇಂದ್ರಕುಮಾರ್ ಅವರನ್ನು ಗೌರವಿಸಲಾಯಿತು.</p>.<p>ಶೇಷಾದ್ರಿಪುರ ಕಾಲೇಜು ಸೇರಿದಂತೆವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>'ಮಹಾತ್ಮ ಗಾಂಧೀಜಿ ಅವರನ್ನು ಆರ್ಎಸ್ಎಸ್ ಮೂಲದವರೇಹತ್ಯೆ ಮಾಡಿದ್ದಾರೆ' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಸರ್ವೋದಯ ದಿನಾಚರಣೆ, ಕಾಲೇಜು ಪ್ರಾಧ್ಯಾಪಕರಿಗಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>'ಗಾಂಧಿ ಹಂತಕ ಗೋಡ್ಸೆ, ಗಾಂಧಿಯನ್ನು ಹತ್ಯೆಗೈಯುವ 15ದಿನಗಳಿಗಿಂತ ಮೊದಲುಬೆಂಗಳೂರಿಗೆ ಬಂದಾಗ ಆರ್ಎಸ್ಎಸ್ ಸಂಘಟಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರೆಂದರೆ ಇದು ಸಂಘ ಪರಿವಾರದ ಕೃತ್ಯವಲ್ಲವೇ? ' ಎಂದು ಪ್ರಶ್ನಿಸಿದರು.</p>.<p>'ಆದರೆ, ಸಂಘ ಪರಿವಾರ ಗೋಡ್ಸೆ ನಮ್ಮವನಲ್ಲ ಎಂದು ಹೇಳುತ್ತಿದೆ. ಬಿಜೆಪಿಯವರು ಹಲಕಾ ಕೆಲಸ ಮಾಡುತ್ತಿದ್ದಾರೆ' ಎಂದು ದೂರಿದರು.</p>.<p>'ಸರ್ಕಾರ ನಾಚಿಕೆಗೇಡಿ ಕೆಲಸ ಮಾಡುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ ಹೊರಟು ಬಂದವರಿಗೆ ಸಾಂತ್ವನ, ಭರವಸೆ ಹೇಳದೆ 'ಅಧಿಕಾರದಲ್ಲಿ ನಾನಿದ್ದಾಗಲೇ ಹೋರಾಟ ಮಾಡಬೇಕಿತ್ತಾ' ಎಂದು ಪ್ರಶ್ನಿಸುವ ರೀತಿ ಅವರಿಗೆ ಶೋಭೆ ತರುವಂಥದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>'ಗಾಂಧಿ ಹತ್ಯೆ ಇಂದಿಗೂ ನೋವುಂಟು ಮಾಡುತ್ತಿದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೋಮುವಾದ, ಹಿಂಸಾತ್ಮಕ ಮನಸ್ಸುಗಳನ್ನು ಖಂಡಿಸಬೇಕು' ಎಂದು ವೊಡೇ ಪಿ.ಕೃಷ್ಣ ಹೇಳಿದರು.</p>.<p>ವೇಮುಗಲ್ ಸೋಮಶೇಖರ್ ವಿರಚಿತ 'ಮಹದೇವ ದೇಸಾಯಿ', ಗಾಂಧೀಜಿ ಅವರ 'ಖಾದಿ ಗ್ರಾಮೋದ್ಯೋಗ', ಹಾಸ್ಯ ಮತ್ತು ಗಾಂಧಿ ಸೇರಿದಂತೆ 8ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ನಡೆದಾಡುವ ಮಹಾತ್ಮ ಗಾಂಧಿ- ವೇಮಗಲ್ ಸೋಮಶೇಖರ್, ಹಿರಿಯ ಕರಡು ತಿದ್ದುಪಡಿಗಾರ ಎಸ್.ಕೆ.ಇಂದ್ರಕುಮಾರ್ ಅವರನ್ನು ಗೌರವಿಸಲಾಯಿತು.</p>.<p>ಶೇಷಾದ್ರಿಪುರ ಕಾಲೇಜು ಸೇರಿದಂತೆವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>