ಬೆಂಗಳೂರು: ಆಂಧ್ರಪ್ರದೇಶದಿಂದ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ರಾಧರವಿ ಅಲಿಯಾಸ್ ರವಿ (29) ಹಾಗೂ ಪಳನಿ ವೇಲು ಅಲಿಯಾಸ್ ಪಳನಿ ಬಂಧಿತರು. ಅವರಿಂದ 120 ಕೆ.ಜಿ 750 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು
‘ಏಪ್ರಿಲ್ 12ರಂದು ಆರೋಪಿ ರವಿ, ಠಾಣೆ ವ್ಯಾಪ್ತಿಯ ಕಾಲೇಜೊಂದರ ಬಳಿ ಗಾಂಜಾ ಮಾರಲು ಬಂದಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಆತನ ಬಳಿ 3 ಕೆ.ಜಿ. 750 ಗ್ರಾಂ ಗಾಂಜಾ ಪತ್ತೆಯಾಯಿತು.’
‘ಆಂಧ್ರಪ್ರದೇಶದಿಂದ ಗಾಂಜಾ ತಂದು ಪಳನಿ ಜೊತೆ ಸೇರಿ ನಗರದಲ್ಲಿ ಮಾರಾಟ ಮಾಡುತ್ತಿರುವುದಾಗಿ ರವಿ ಮಾಹಿತಿ ನೀಡಿದ್ದ. ಅದರನ್ವಯ ಪಳನಿಯನ್ನೂ ಬಂಧಿಸಲಾಯಿತು’ ಎಂದರು.
‘ಹಲವು ವರ್ಷಗಳಿಂದ ಆರೋಪಿಗಳು ಗಾಂಜಾ ಮಾರುತ್ತಿದ್ದರು. ತಮಿಳುನಾಡಿನ ನೇರಳಗಿರಿ ಗ್ರಾಮದ ಜಮೀನೊಂದರ ಪಂಪ್ಹೌಸ್ನಲ್ಲಿ ಗಾಂಜಾ ಬಚ್ಚಿಟ್ಟಿದ್ದರು. ಈ ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ, ಫಾರ್ಮ್ಹೌಸ್ನಲ್ಲಿದ್ದ 117 ಕೆ.ಜಿ. ಗಾಂಜಾವನ್ನೂ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.