<p><strong>ಬೆಂಗಳೂರು</strong>: ಮಲೆನಾಡಿನಲ್ಲಿ ಮಳೆ, ಮರ, ಕಾಡು ಮಾಯವಾಗಿ ನೀರಿನ ಕೊರತೆ ಉಂಟಾಗಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.</p>.<p>ನಗರದಲ್ಲಿ ಶನಿವಾರ ಮಲೆನಾಡು ಬರಹಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಡಸುರಗಿ (ಕಾನನದ ಕುಸುಮಗಳು) ಜನಾರ್ಪಣೆಗೊಳಿಸಿ ಮಾತನಾಡಿದರು.</p>.<p>‘ಬಾಲ್ಯದಲ್ಲಿ ಮನೆಯಿಂದ ಹೊರ ಬಂದರೆ ಮಳೆ, ಮರ, ಪ್ರಾಣಿಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದೆವು. ಕಾಡಿನಲ್ಲಿ ಹಾದು ಹೋಗಲು ಭಯವಾಗುತ್ತಿತ್ತು. ಆಗ ಜತೆಯಲ್ಲಿ ಒಬ್ಬರನ್ನು ಕರೆದೊಯ್ಯುತ್ತಿದ್ದೆವು. ಈಗ ಮಲೆನಾಡಿನ ಪರಿಸ್ಥಿತಿ ಬದಲಾಗಿದ್ದು, ಬಟಾ ಬಯಲಾಗಿದೆ. ಮಳೆ, ಮರ, ಪ್ರಾಣಿಗಳು ಇಲ್ಲವಾಗಿವೆ. ಫೆಬ್ರುವರಿ ತಿಂಗಳಲ್ಲಿ ₹3 ಸಾವಿರಕ್ಕೆ ಟ್ಯಾಂಕರ್ ನೀರು ತರಿಸಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಹೇಳಿದರು. <br><br>ಪ್ರಸ್ತುತ ದಿನಮಾನಗಳಲ್ಲಿ ಕೇವಲ ಭೂತಕಾಲದ ಬಗ್ಗೆ ಯೋಚಿಸಿದರೆ ಸಾಲದು. ಅದೇ ರೀತಿ ವರ್ತಮಾನದ ಬಗ್ಗೆ ಮಾತ್ರ ಮಾತನಾಡಿದರೆ ಸಾಲದು. ಭೂತಕಾಲ ಮತ್ತು ವರ್ತಮಾನವನ್ನು ಸೇರಿಸಿಕೊಂಡು ಭವಿಷ್ಯವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.</p>.<p>ಸಾಹಿತಿ ಕುವೆಂಪು ಅವರು ತಮಗಿದ್ದ ಅಗಾಧ ಜೀವನ ಪ್ರೇಮ, ಅನುಭವಗಳನ್ನು ಸಾಹಿತ್ಯದಲ್ಲಿ ಮಂಡಿಸುತ್ತಿದ್ದರು. ಅನುಭವದಲ್ಲಿ ಜೀವನವನ್ನು ನೋಡುವುದು ಮತ್ತು ಆ ಮುಖೇನ ಜೀವನವನ್ನು ಗ್ರಹಿಸುವುದು ಅವರ ವಿಶಿಷ್ಟತೆಯಾಗಿತ್ತು. ಸಾಹಿತಿ ಅನಂತಮೂರ್ತಿ ಅವರು ಯೋಚನೆಗಳ ಮೂಲಕ ಬದುಕನ್ನು ನೋಡುತ್ತಿದ್ದರು ಎಂದರು.</p>.<p>ಮಲೆನಾಡಿನ ಹಲವು ಸಾಧಕರನ್ನು ಮುನ್ನೆಲೆಗೆ ತರುವುದು ಮತ್ತು ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯವಿದೆ. ಮಲೆನಾಡಿನಲ್ಲಿ ವಿಜ್ಞಾನಿಗಳು, ಪತ್ರಕರ್ತರು, ಎಂಜಿನಿಯರ್ಗಳು , ಉದ್ಯಮಿಗಳು, ರಾಜಕಾರಣಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಇದ್ದಾರೆ. ಕಾಡಸುರಗಿಯಲ್ಲಿ 40 ಸಾಧಕರ ಲೇಖನವಿದೆ. ಮಲೆನಾಡಿನ ಒಂದು ಭಾಗದಿಂದ ಇಷ್ಟೊಂದು ಸಾಧಕರು ಹೇಗೆ ಬರುವುದಕ್ಕೆ ಸಾಧ್ಯ ಎಂದು ಯೋಚಿಸಿದಾಗ, ಹಲವರು ಅಲ್ಲಿನ ಪರಿಸರದ ಗುಣ ಎನ್ನುತ್ತಾರೆ ಎಂದು ನುಡಿದರು.</p>.<p>ಹೊಸ ಪ್ರತಿಭೆಗಳನ್ನು ಗುರುತಿಸುವಾಗ ಅವರಿಗೆ ಎಷ್ಟರ ಮಟ್ಟಿಗೆ ಜೀವನ ಪ್ರೀತಿ, ಸಂಶೋಧನೆಗಳು, ಕೆಲಸಗಳು, ಕ್ರಿಯೆಗಳು ಜೀವಪರವಾಗಿದೆ ಎನ್ನುವುದನ್ನು ನೋಡಬೇಕು. ಪ್ರತಿ ವರ್ಷವೂ ಹೊಸ ಸಾಧಕರನ್ನು ಪರಿಚಯಿಸಿ, ಪುಸ್ತಕ ಹೊರ ತರಬೇಕು ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಗಾಯಕಿ ಬಿ.ಕೆ.ಸುಮಿತ್ರಾ, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷ ಪ್ರೊ.ಎನ್.ಎಸ್.ಶ್ರೀಧರ್ ಮೂರ್ತಿ, ಜವಹಾರಲಾಲ್ ನೆಹರೂ ತಾರಾಲಯ ನಿರ್ದೇಶಕ ಬಿ.ಆರ್.ಗುರುಪ್ರಸಾದ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಲೆನಾಡಿನಲ್ಲಿ ಮಳೆ, ಮರ, ಕಾಡು ಮಾಯವಾಗಿ ನೀರಿನ ಕೊರತೆ ಉಂಟಾಗಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.</p>.<p>ನಗರದಲ್ಲಿ ಶನಿವಾರ ಮಲೆನಾಡು ಬರಹಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಡಸುರಗಿ (ಕಾನನದ ಕುಸುಮಗಳು) ಜನಾರ್ಪಣೆಗೊಳಿಸಿ ಮಾತನಾಡಿದರು.</p>.<p>‘ಬಾಲ್ಯದಲ್ಲಿ ಮನೆಯಿಂದ ಹೊರ ಬಂದರೆ ಮಳೆ, ಮರ, ಪ್ರಾಣಿಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದೆವು. ಕಾಡಿನಲ್ಲಿ ಹಾದು ಹೋಗಲು ಭಯವಾಗುತ್ತಿತ್ತು. ಆಗ ಜತೆಯಲ್ಲಿ ಒಬ್ಬರನ್ನು ಕರೆದೊಯ್ಯುತ್ತಿದ್ದೆವು. ಈಗ ಮಲೆನಾಡಿನ ಪರಿಸ್ಥಿತಿ ಬದಲಾಗಿದ್ದು, ಬಟಾ ಬಯಲಾಗಿದೆ. ಮಳೆ, ಮರ, ಪ್ರಾಣಿಗಳು ಇಲ್ಲವಾಗಿವೆ. ಫೆಬ್ರುವರಿ ತಿಂಗಳಲ್ಲಿ ₹3 ಸಾವಿರಕ್ಕೆ ಟ್ಯಾಂಕರ್ ನೀರು ತರಿಸಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಹೇಳಿದರು. <br><br>ಪ್ರಸ್ತುತ ದಿನಮಾನಗಳಲ್ಲಿ ಕೇವಲ ಭೂತಕಾಲದ ಬಗ್ಗೆ ಯೋಚಿಸಿದರೆ ಸಾಲದು. ಅದೇ ರೀತಿ ವರ್ತಮಾನದ ಬಗ್ಗೆ ಮಾತ್ರ ಮಾತನಾಡಿದರೆ ಸಾಲದು. ಭೂತಕಾಲ ಮತ್ತು ವರ್ತಮಾನವನ್ನು ಸೇರಿಸಿಕೊಂಡು ಭವಿಷ್ಯವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.</p>.<p>ಸಾಹಿತಿ ಕುವೆಂಪು ಅವರು ತಮಗಿದ್ದ ಅಗಾಧ ಜೀವನ ಪ್ರೇಮ, ಅನುಭವಗಳನ್ನು ಸಾಹಿತ್ಯದಲ್ಲಿ ಮಂಡಿಸುತ್ತಿದ್ದರು. ಅನುಭವದಲ್ಲಿ ಜೀವನವನ್ನು ನೋಡುವುದು ಮತ್ತು ಆ ಮುಖೇನ ಜೀವನವನ್ನು ಗ್ರಹಿಸುವುದು ಅವರ ವಿಶಿಷ್ಟತೆಯಾಗಿತ್ತು. ಸಾಹಿತಿ ಅನಂತಮೂರ್ತಿ ಅವರು ಯೋಚನೆಗಳ ಮೂಲಕ ಬದುಕನ್ನು ನೋಡುತ್ತಿದ್ದರು ಎಂದರು.</p>.<p>ಮಲೆನಾಡಿನ ಹಲವು ಸಾಧಕರನ್ನು ಮುನ್ನೆಲೆಗೆ ತರುವುದು ಮತ್ತು ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯವಿದೆ. ಮಲೆನಾಡಿನಲ್ಲಿ ವಿಜ್ಞಾನಿಗಳು, ಪತ್ರಕರ್ತರು, ಎಂಜಿನಿಯರ್ಗಳು , ಉದ್ಯಮಿಗಳು, ರಾಜಕಾರಣಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಇದ್ದಾರೆ. ಕಾಡಸುರಗಿಯಲ್ಲಿ 40 ಸಾಧಕರ ಲೇಖನವಿದೆ. ಮಲೆನಾಡಿನ ಒಂದು ಭಾಗದಿಂದ ಇಷ್ಟೊಂದು ಸಾಧಕರು ಹೇಗೆ ಬರುವುದಕ್ಕೆ ಸಾಧ್ಯ ಎಂದು ಯೋಚಿಸಿದಾಗ, ಹಲವರು ಅಲ್ಲಿನ ಪರಿಸರದ ಗುಣ ಎನ್ನುತ್ತಾರೆ ಎಂದು ನುಡಿದರು.</p>.<p>ಹೊಸ ಪ್ರತಿಭೆಗಳನ್ನು ಗುರುತಿಸುವಾಗ ಅವರಿಗೆ ಎಷ್ಟರ ಮಟ್ಟಿಗೆ ಜೀವನ ಪ್ರೀತಿ, ಸಂಶೋಧನೆಗಳು, ಕೆಲಸಗಳು, ಕ್ರಿಯೆಗಳು ಜೀವಪರವಾಗಿದೆ ಎನ್ನುವುದನ್ನು ನೋಡಬೇಕು. ಪ್ರತಿ ವರ್ಷವೂ ಹೊಸ ಸಾಧಕರನ್ನು ಪರಿಚಯಿಸಿ, ಪುಸ್ತಕ ಹೊರ ತರಬೇಕು ಎಂದು ಸಲಹೆ ನೀಡಿದರು.</p>.<p>ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಗಾಯಕಿ ಬಿ.ಕೆ.ಸುಮಿತ್ರಾ, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷ ಪ್ರೊ.ಎನ್.ಎಸ್.ಶ್ರೀಧರ್ ಮೂರ್ತಿ, ಜವಹಾರಲಾಲ್ ನೆಹರೂ ತಾರಾಲಯ ನಿರ್ದೇಶಕ ಬಿ.ಆರ್.ಗುರುಪ್ರಸಾದ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>