<p><strong>ಬೆಂಗಳೂರು</strong>: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೂವು ಮತ್ತು ಹಣ್ಣುಗಳ ದರಗಳು ಗಗನಕ್ಕೇರಿವೆ. ಆದರೂ, ಹಬ್ಬದ ಮುನ್ನ ದಿನ ಮಾರುಕಟ್ಟೆಗಳಲ್ಲಿ ಖರೀದಿಗೆಗ್ರಾಹಕರು ಮುಗಿಬಿದ್ದರು.</p>.<p>ವಾರದಿಂದ ಈಚೆಗೆ ಮಾರುಕಟ್ಟೆಗಳಲ್ಲಿ ಹಬ್ಬದ ಪರಿಕರಗಳ ಮಾರಾಟ ಗರಿಗೆದರಿತ್ತು. ನಗರದ ಹಲವೆಡೆ ತಾತ್ಕಾಲಿಕ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ.</p>.<p>ಹೂವು ಹಣ್ಣಿನ ಚಿಲ್ಲರೆ ಮತ್ತು ಸಗಟು ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ಕೆ.ಜಿ. ದಾಳಿಂಬೆ ಹಣ್ಣಿಗೆ ₹120ರಷ್ಟಿದ್ದ ದರ, ₹140ರಿಂದ ₹150 ತನಕ ಹೆಚ್ಚಳವಾಗಿದೆ. ಕಳೆದ ವಾರ ₹150ರಿಂದ ₹ 200ರ ಆಸುಪಾಸಿನಲ್ಲಿದ್ದ ಇದ್ದ ಸೇಬು ಹಣ್ಣಿನ ದರ ಕೆ.ಜಿಗೆ ₹200ರಿಂದ ₹300ರ ತನಕ ಹೆಚ್ಚಳವಾಗಿದೆ. ಕಿತ್ತಳೆ ಹಣ್ಣಿನ ದರವೂ ₹100ರ ಗಡಿ ದಾಟಿದೆ. ಮೂಸಂಬಿ ಹಣ್ಣಿನ ದರ ಮಾತ್ರ ಕೆ.ಜಿ.ಗೆ ₹30ರಲ್ಲಿ ಉಳಿದಿದೆ. ಇನ್ನು ಎರಡು ಮೂರು ದಿನಗಳಲ್ಲಿ ಮೂಸಂಬಿ ಹಣ್ಣಿನ ದರ ಕೆ.ಜಿ.ಗೆ ₹15ರಿಂದ ₹20ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>‘ಹೂವಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ, ಕಳೆದ ಕೆಲ ದಿನಗಳಿಂದ ದರಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕನಕಾಂಬರ ಮತ್ತು ಮಲ್ಲಿಗೆ ಹೂವುಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಈ ಹೂವುಗಳನ್ನು ನಾವು ಮಾರಾಟಕ್ಕೇ ಇಡುತ್ತಿಲ್ಲ’ ಎಂದು ಚಿಲ್ಲರೆ ವ್ಯಾಪಾರಿಗಳು ತಿಳಿಸಿದರು.</p>.<p>ಸಣ್ಣ ಗುಲಾಬಿ ಹೂವಿಗೆ ದರ ಕಳೆದ ವಾರ ₹100 ಇದ್ದದ್ದು, ₹120ಕ್ಕೆ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ ಹೂವಿನ ದರ ಕೂಡ ₹80ರಿಂದ 100ಕ್ಕೆ ಜಿಗಿದಿದೆ. ಮೊಳ ಮಲ್ಲಿಗೆ ಹೂವಿಗೆ ಸಗಟು ಮಾರುಕಟ್ಟೆಯಲ್ಲೇ ₹20 ಇದೆ. ತರಕಾರಿಗಳ ಬೆಲೆಗಳು ಹೆಚ್ಚು ಕಡಿಮೆ ಅದೇ ರೀತಿ ಇದೆ ಎಂದು ಕಲಾಸಿಪಾಳ್ಯದ ಸಗಟು ವ್ಯಾಪಾರಿಗಳು ಹೇಳುತ್ತಾರೆ.</p>.<p>ಹಬ್ಬದ ಸಂಭ್ರಮದಲ್ಲಿದ್ದ ಜನ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಮುಗಿ ಬಿದ್ದಿದ್ದರು.</p>.<p class="Briefhead"><strong>ಪುಟ್ಟ ಮೂರ್ತಿಗಳಿಗೆ ಬಲು ಬೇಡಿಕೆ</strong></p>.<p>ಹಬ್ಬದ ವೇಳೆ ಪೂಜಿಸಲು ಭಕ್ತರು ಗೌರಿ–ಗಣೇಶ ಮೂರ್ತಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮೀರದಂತೆ ಮತ್ತು ಮನೆಯಲ್ಲಿ 2 ಅಡಿ ಎತ್ತರ ಮೀರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮಾತ್ರ ಅವಕಾಶ ಇರುವುದರಿಂದ ಚಿಕ್ಕ–ಚಿಕ್ಕ ಮೂರ್ತಿಗಳನ್ನು ಹುಡುಕಿ ಗ್ರಾಹಕರು ಖರೀದಿಸಿದರು.</p>.<p>ಮಲ್ಲೇಶ್ವರ, ಮಾವಳ್ಳಿ, ಜಯನಗರ, ಬಸವನಗುಡಿ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳ ಮಾರಾಟ ಜೋರಾಗಿ ನಡೆದಿತ್ತು. ಕೋವಿಡ್ ನಿರ್ಬಂಧಗಳಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಅಡೆ–ತಡೆ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.</p>.<p>ಪರಿಸರ ಸ್ನೇಹಿ ಮತ್ತು ಔಷಧಿಯ ಗುಣ ಹೊಂದಿರುವ ಅರಿಸಿನದಿಂದ ಗಣೇಶ ಮೂರ್ತಿಗಳನ್ನು ಮಾಡಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನ ನಡೆಸಿದ್ದರಿಂದ ಇಂತಹ ಮೂರ್ತಿಗಳ ತಯಾರಿಕೆ ಮತ್ತು ಬಳಕೆಯೂ ಹೆಚ್ಚಾಗಿದೆ.</p>.<p>‘ಹಬ್ಬಕ್ಕೆ ಕೆಲವೇ ದಿನಗಳು ಮುನ್ನ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿದ್ದರಿಂದ, ಸರ್ಕಾರ ದಿನಕ್ಕೊಂದೊಂದು ರೀತಿ ಆದೇಶ ಹೊರಡಿಸಿದ್ದರಿಂದ ವಿಗ್ರಹಗಳ ಮಾರಾಟಕ್ಕೆ ತೊಂದರೆಯಾಯಿತು’ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರು.</p>.<p>‘ಯಾವುದೇ ನಿಯಮ ಮಾಡುವುದಾದರೂ, ಸಾಕಷ್ಟು ಮುನ್ನವೇ ತೀರ್ಮಾನ ಮಾಡಬೇಕು. ಗಣೇಶ ಮೂರ್ತಿಗಳು ಒಣಗಲು ಮೂರು ತಿಂಗಳು ಬೇಕಾಗುತ್ತದೆ. ಕೊನೆಯ ಗಳಿಗೆಯಲ್ಲಿ ತೀರ್ಮಾನ ಮಾಡಿದರೆ ಅನನುಕೂಲವಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೂವು ಮತ್ತು ಹಣ್ಣುಗಳ ದರಗಳು ಗಗನಕ್ಕೇರಿವೆ. ಆದರೂ, ಹಬ್ಬದ ಮುನ್ನ ದಿನ ಮಾರುಕಟ್ಟೆಗಳಲ್ಲಿ ಖರೀದಿಗೆಗ್ರಾಹಕರು ಮುಗಿಬಿದ್ದರು.</p>.<p>ವಾರದಿಂದ ಈಚೆಗೆ ಮಾರುಕಟ್ಟೆಗಳಲ್ಲಿ ಹಬ್ಬದ ಪರಿಕರಗಳ ಮಾರಾಟ ಗರಿಗೆದರಿತ್ತು. ನಗರದ ಹಲವೆಡೆ ತಾತ್ಕಾಲಿಕ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ.</p>.<p>ಹೂವು ಹಣ್ಣಿನ ಚಿಲ್ಲರೆ ಮತ್ತು ಸಗಟು ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ಕೆ.ಜಿ. ದಾಳಿಂಬೆ ಹಣ್ಣಿಗೆ ₹120ರಷ್ಟಿದ್ದ ದರ, ₹140ರಿಂದ ₹150 ತನಕ ಹೆಚ್ಚಳವಾಗಿದೆ. ಕಳೆದ ವಾರ ₹150ರಿಂದ ₹ 200ರ ಆಸುಪಾಸಿನಲ್ಲಿದ್ದ ಇದ್ದ ಸೇಬು ಹಣ್ಣಿನ ದರ ಕೆ.ಜಿಗೆ ₹200ರಿಂದ ₹300ರ ತನಕ ಹೆಚ್ಚಳವಾಗಿದೆ. ಕಿತ್ತಳೆ ಹಣ್ಣಿನ ದರವೂ ₹100ರ ಗಡಿ ದಾಟಿದೆ. ಮೂಸಂಬಿ ಹಣ್ಣಿನ ದರ ಮಾತ್ರ ಕೆ.ಜಿ.ಗೆ ₹30ರಲ್ಲಿ ಉಳಿದಿದೆ. ಇನ್ನು ಎರಡು ಮೂರು ದಿನಗಳಲ್ಲಿ ಮೂಸಂಬಿ ಹಣ್ಣಿನ ದರ ಕೆ.ಜಿ.ಗೆ ₹15ರಿಂದ ₹20ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>‘ಹೂವಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ, ಕಳೆದ ಕೆಲ ದಿನಗಳಿಂದ ದರಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕನಕಾಂಬರ ಮತ್ತು ಮಲ್ಲಿಗೆ ಹೂವುಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಈ ಹೂವುಗಳನ್ನು ನಾವು ಮಾರಾಟಕ್ಕೇ ಇಡುತ್ತಿಲ್ಲ’ ಎಂದು ಚಿಲ್ಲರೆ ವ್ಯಾಪಾರಿಗಳು ತಿಳಿಸಿದರು.</p>.<p>ಸಣ್ಣ ಗುಲಾಬಿ ಹೂವಿಗೆ ದರ ಕಳೆದ ವಾರ ₹100 ಇದ್ದದ್ದು, ₹120ಕ್ಕೆ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ ಹೂವಿನ ದರ ಕೂಡ ₹80ರಿಂದ 100ಕ್ಕೆ ಜಿಗಿದಿದೆ. ಮೊಳ ಮಲ್ಲಿಗೆ ಹೂವಿಗೆ ಸಗಟು ಮಾರುಕಟ್ಟೆಯಲ್ಲೇ ₹20 ಇದೆ. ತರಕಾರಿಗಳ ಬೆಲೆಗಳು ಹೆಚ್ಚು ಕಡಿಮೆ ಅದೇ ರೀತಿ ಇದೆ ಎಂದು ಕಲಾಸಿಪಾಳ್ಯದ ಸಗಟು ವ್ಯಾಪಾರಿಗಳು ಹೇಳುತ್ತಾರೆ.</p>.<p>ಹಬ್ಬದ ಸಂಭ್ರಮದಲ್ಲಿದ್ದ ಜನ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಮುಗಿ ಬಿದ್ದಿದ್ದರು.</p>.<p class="Briefhead"><strong>ಪುಟ್ಟ ಮೂರ್ತಿಗಳಿಗೆ ಬಲು ಬೇಡಿಕೆ</strong></p>.<p>ಹಬ್ಬದ ವೇಳೆ ಪೂಜಿಸಲು ಭಕ್ತರು ಗೌರಿ–ಗಣೇಶ ಮೂರ್ತಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮೀರದಂತೆ ಮತ್ತು ಮನೆಯಲ್ಲಿ 2 ಅಡಿ ಎತ್ತರ ಮೀರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮಾತ್ರ ಅವಕಾಶ ಇರುವುದರಿಂದ ಚಿಕ್ಕ–ಚಿಕ್ಕ ಮೂರ್ತಿಗಳನ್ನು ಹುಡುಕಿ ಗ್ರಾಹಕರು ಖರೀದಿಸಿದರು.</p>.<p>ಮಲ್ಲೇಶ್ವರ, ಮಾವಳ್ಳಿ, ಜಯನಗರ, ಬಸವನಗುಡಿ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳ ಮಾರಾಟ ಜೋರಾಗಿ ನಡೆದಿತ್ತು. ಕೋವಿಡ್ ನಿರ್ಬಂಧಗಳಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಅಡೆ–ತಡೆ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.</p>.<p>ಪರಿಸರ ಸ್ನೇಹಿ ಮತ್ತು ಔಷಧಿಯ ಗುಣ ಹೊಂದಿರುವ ಅರಿಸಿನದಿಂದ ಗಣೇಶ ಮೂರ್ತಿಗಳನ್ನು ಮಾಡಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನ ನಡೆಸಿದ್ದರಿಂದ ಇಂತಹ ಮೂರ್ತಿಗಳ ತಯಾರಿಕೆ ಮತ್ತು ಬಳಕೆಯೂ ಹೆಚ್ಚಾಗಿದೆ.</p>.<p>‘ಹಬ್ಬಕ್ಕೆ ಕೆಲವೇ ದಿನಗಳು ಮುನ್ನ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿದ್ದರಿಂದ, ಸರ್ಕಾರ ದಿನಕ್ಕೊಂದೊಂದು ರೀತಿ ಆದೇಶ ಹೊರಡಿಸಿದ್ದರಿಂದ ವಿಗ್ರಹಗಳ ಮಾರಾಟಕ್ಕೆ ತೊಂದರೆಯಾಯಿತು’ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರು.</p>.<p>‘ಯಾವುದೇ ನಿಯಮ ಮಾಡುವುದಾದರೂ, ಸಾಕಷ್ಟು ಮುನ್ನವೇ ತೀರ್ಮಾನ ಮಾಡಬೇಕು. ಗಣೇಶ ಮೂರ್ತಿಗಳು ಒಣಗಲು ಮೂರು ತಿಂಗಳು ಬೇಕಾಗುತ್ತದೆ. ಕೊನೆಯ ಗಳಿಗೆಯಲ್ಲಿ ತೀರ್ಮಾನ ಮಾಡಿದರೆ ಅನನುಕೂಲವಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>