<p><strong>ಬೆಂಗಳೂರು:</strong> ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ, ಓಎಲ್ಎಕ್ಸ್ ಸೇರಿ ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ.</p>.<p>ನಗರದ ಉದ್ಯಮಿಯೊಬ್ಬರು ಜಿಎಸ್ಟಿ ಮರುಪಾವತಿ ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ ಖಾತೆಯನ್ನು ಖದೀಮರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಮೈಸೂರು ರಸ್ತೆಯ ಕುವೆಂಪು ನಗರದ ಉದ್ಯಮಿ ಸುರೇಶ್ ಜೈನ್ ಎಂಬುವರ ಖಾತೆಯನ್ನು (29AWHP*******ZO) ವಂಚಕರು ಹ್ಯಾಕ್ ಮಾಡಿದ್ದಾರೆ. ಪ್ರಸಕ್ತ ವರ್ಷದ ಜಿಎಸ್ಟಿ ಮರುಪಾವತಿ ಮಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ದೂರು ನೀಡಿರುವ ಸುರೇಶ್ ಜೈನ್, ಹ್ಯಾಕ್ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p class="Subhead"><strong>ಜಾಲತಾಣ ನಿರ್ವಹಣೆಗಾರರಿಗೆ ಪತ್ರ:</strong> ಜಿಎಸ್ಟಿ ಖಾತೆ ಹ್ಯಾಕ್ ಸಂಬಂಧ ನಗರದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಜಿಎಸ್ಟಿ ಜಾಲತಾಣ ಮೇಲೆಯೇ ವಂಚಕರ ಕಣ್ಣು ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು, ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳ ಸಹಕಾರದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.</p>.<p>ಜಿಎಸ್ಟಿ ಜಾಲತಾಣ ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳ ಮೂಲಕ ಪತ್ರ ಬರೆದಿರುವ ಪೊಲೀಸರು, ‘ಜಿಎಸ್ಟಿ ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಪಿಗಳ ಬಗ್ಗೆ ಏನಾದರೂ ಸುಳಿವು ಇದ್ದರೆ ವರದಿ ನೀಡಿ’ ಎಂದು ಕೋರಿದ್ದಾರೆ.</p>.<p class="Subhead"><strong>ಪರಿಚಯಸ್ಥರಿಂದ ಕೃತ್ಯ ಶಂಕೆ:</strong> ‘ಕೆಲ ವರ್ಷಗಳ ಹಿಂದೆಯೇ ಜಿಎಸ್ಟಿ ಖಾತೆ ತೆರೆದಿದ್ದ ಸುರೇಶ್, ಜಿಎಸ್ಟಿ ಮರುಪಾವತಿ ಮಾಡುತ್ತಿದ್ದರು. ಖಾತೆ ತೆರೆಯಲು ಅಗತ್ಯವಿರುವ ‘ಯೂಸರ್ ನೇಮ್’ ಹಾಗೂ ‘ಪಾಸ್ವರ್ಡ್’ ಅವರ ಬಳಿ ಇತ್ತು. ಆ ಮಾಹಿತಿ ತಿಳಿದುಕೊಂಡ ಪರಿಚಯಸ್ಥರೇ ಖಾತೆ ತೆರೆದು ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಬದಲಾಯಿಸಿರುವ ಮಾಹಿತಿ ಇದೆ. ಈ ರೀತಿ ಕೃತ್ಯವಾದರೂ ಹ್ಯಾಕ್ ಎಂದೇ ಪರಿಗಣಿ<br />ಸಲಾಗುವುದು. ಈ ಸಂಬಂಧವೂ ಹಲವರನ್ನು ವಿಚಾರಣೆ ನಡೆಸಲಾಗಿದೆ. ಸದ್ಯಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.</p>.<p><strong>‘ಜಿಎಸ್ಟಿ ಜಾಲತಾಣ ಸುರಕ್ಷಿತ’</strong></p>.<p>‘ಜಿಎಸ್ಟಿ ಜಾಲತಾಣ ಸುರಕ್ಷಿತವಾಗಿರುವುದಾಗಿ ಅದರ ನಿರ್ವಾಹಕರು ಹೇಳಿದ್ದಾರೆ. ದೂರುದಾರ ಸುರೇಶ್ ಅವರ ವೈಯಕ್ತಿಕ ಖಾತೆ ಮಾತ್ರ ಹ್ಯಾಕ್ ಆಗಿದ್ದು, ಅದರಿಂದ ಯಾವುದೇ ನಷ್ಟವಾಗಿಲ್ಲ. ಜಿಎಸ್ಟಿ ಮರುಪಾವತಿಗೆ ಮಾತ್ರ ಸಮಸ್ಯೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಖಾತೆ ಹ್ಯಾಕ್ ಮಾಡುವುದು ಗಂಭೀರ ಅಪರಾಧ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ, ಓಎಲ್ಎಕ್ಸ್ ಸೇರಿ ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ.</p>.<p>ನಗರದ ಉದ್ಯಮಿಯೊಬ್ಬರು ಜಿಎಸ್ಟಿ ಮರುಪಾವತಿ ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ ಖಾತೆಯನ್ನು ಖದೀಮರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>‘ಮೈಸೂರು ರಸ್ತೆಯ ಕುವೆಂಪು ನಗರದ ಉದ್ಯಮಿ ಸುರೇಶ್ ಜೈನ್ ಎಂಬುವರ ಖಾತೆಯನ್ನು (29AWHP*******ZO) ವಂಚಕರು ಹ್ಯಾಕ್ ಮಾಡಿದ್ದಾರೆ. ಪ್ರಸಕ್ತ ವರ್ಷದ ಜಿಎಸ್ಟಿ ಮರುಪಾವತಿ ಮಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ದೂರು ನೀಡಿರುವ ಸುರೇಶ್ ಜೈನ್, ಹ್ಯಾಕ್ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p class="Subhead"><strong>ಜಾಲತಾಣ ನಿರ್ವಹಣೆಗಾರರಿಗೆ ಪತ್ರ:</strong> ಜಿಎಸ್ಟಿ ಖಾತೆ ಹ್ಯಾಕ್ ಸಂಬಂಧ ನಗರದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಜಿಎಸ್ಟಿ ಜಾಲತಾಣ ಮೇಲೆಯೇ ವಂಚಕರ ಕಣ್ಣು ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು, ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳ ಸಹಕಾರದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.</p>.<p>ಜಿಎಸ್ಟಿ ಜಾಲತಾಣ ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳ ಮೂಲಕ ಪತ್ರ ಬರೆದಿರುವ ಪೊಲೀಸರು, ‘ಜಿಎಸ್ಟಿ ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಪಿಗಳ ಬಗ್ಗೆ ಏನಾದರೂ ಸುಳಿವು ಇದ್ದರೆ ವರದಿ ನೀಡಿ’ ಎಂದು ಕೋರಿದ್ದಾರೆ.</p>.<p class="Subhead"><strong>ಪರಿಚಯಸ್ಥರಿಂದ ಕೃತ್ಯ ಶಂಕೆ:</strong> ‘ಕೆಲ ವರ್ಷಗಳ ಹಿಂದೆಯೇ ಜಿಎಸ್ಟಿ ಖಾತೆ ತೆರೆದಿದ್ದ ಸುರೇಶ್, ಜಿಎಸ್ಟಿ ಮರುಪಾವತಿ ಮಾಡುತ್ತಿದ್ದರು. ಖಾತೆ ತೆರೆಯಲು ಅಗತ್ಯವಿರುವ ‘ಯೂಸರ್ ನೇಮ್’ ಹಾಗೂ ‘ಪಾಸ್ವರ್ಡ್’ ಅವರ ಬಳಿ ಇತ್ತು. ಆ ಮಾಹಿತಿ ತಿಳಿದುಕೊಂಡ ಪರಿಚಯಸ್ಥರೇ ಖಾತೆ ತೆರೆದು ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಬದಲಾಯಿಸಿರುವ ಮಾಹಿತಿ ಇದೆ. ಈ ರೀತಿ ಕೃತ್ಯವಾದರೂ ಹ್ಯಾಕ್ ಎಂದೇ ಪರಿಗಣಿ<br />ಸಲಾಗುವುದು. ಈ ಸಂಬಂಧವೂ ಹಲವರನ್ನು ವಿಚಾರಣೆ ನಡೆಸಲಾಗಿದೆ. ಸದ್ಯಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.</p>.<p><strong>‘ಜಿಎಸ್ಟಿ ಜಾಲತಾಣ ಸುರಕ್ಷಿತ’</strong></p>.<p>‘ಜಿಎಸ್ಟಿ ಜಾಲತಾಣ ಸುರಕ್ಷಿತವಾಗಿರುವುದಾಗಿ ಅದರ ನಿರ್ವಾಹಕರು ಹೇಳಿದ್ದಾರೆ. ದೂರುದಾರ ಸುರೇಶ್ ಅವರ ವೈಯಕ್ತಿಕ ಖಾತೆ ಮಾತ್ರ ಹ್ಯಾಕ್ ಆಗಿದ್ದು, ಅದರಿಂದ ಯಾವುದೇ ನಷ್ಟವಾಗಿಲ್ಲ. ಜಿಎಸ್ಟಿ ಮರುಪಾವತಿಗೆ ಮಾತ್ರ ಸಮಸ್ಯೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಖಾತೆ ಹ್ಯಾಕ್ ಮಾಡುವುದು ಗಂಭೀರ ಅಪರಾಧ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>