<p><strong>ಬೆಂಗಳೂರು:</strong> ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆ ನಿಶ್ಚಯಮಾಡಿಕೊಂಡ ಕಾರಣ ಮನನೊಂದ ಜಿಮ್ ತರಬೇತುದಾರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಗೆಳೆಯರ ಬಳಗ ಬಡಾವಣೆಯ ನಿವಾಸಿ ಶ್ರೀಧರ್ ಅವರ ಮಗ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡವರು.</p>.<p>ಜಿಮ್ ತರಬೇತುದಾರರಾಗಿದ್ದ ಕಿರಣ್, ರಾಜ್ಯಮಟ್ಟದ ದೇಹದಾರ್ಢ್ಯ ಪಟುವಾಗಿದ್ದರು. ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆ ಯುವತಿ ಏಳೆಂಟು ತಿಂಗಳ ಹಿಂದೆ ಕಿರಣ್ ಮನೆಗೆ ಬಂದು ಪೋಷಕರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿ ಮದುವೆ ಮಾಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಪೋಷಕರು, ಕಿರಣ್ ಅವರ ಅಣ್ಣನ ಮದುವೆಯ ನಂತರ ಮದುವೆ ಮಾಡಿಸುವುದಾಗಿ ಹೇಳಿ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ಈ ನಡುವೆ ಬೇರೊಬ್ಬನ ಜತೆ ತನ್ನ ಮದುವೆ ನಿಶ್ಚಯ ಮಾಡಿಕೊಂಡ ಯುವತಿ, ಕಿರಣ್ಗೆ ವಿವಾಹದ ಆಮಂತ್ರಣ ಪತ್ರಿಕೆ ಕೊಟ್ಟಿದ್ದರು. ಅಲ್ಲದೆ, ವರನ ಕಡೆಯವರು ಮದುವೆಗೆ ಕೊಡಿಸಿದ್ದ ಸೀರೆಯನ್ನು ತೋರಿಸಿದ್ದರು. ಈ ಘಟನೆ ಬಳಿಕ ಆತ ಕುಟುಂಬದ ಸದಸ್ಯರ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.</p>.<p>ಸಾವಿಗೆ ಪ್ರೇಯಸಿಯೇ ಕಾರಣ: ‘ಪ್ರೇಯಸಿ ಬೇರೊಬ್ಬರನ್ನು ಮದುವೆಯಾಗುತ್ತಿರುವ ವಿಚಾರ ತಿಳಿದು ಮಾನಸಿಕವಾಗಿ ಕಿರಣ್ ಕುಗ್ಗಿಹೋಗಿದ್ದರು. ತನ್ನ ಸಾವಿಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಮಗನ ಸಾವಿಗೆ ಆತನ ಪ್ರೇಯಸಿಯೇ ಕಾರಣ ಎಂದು ಕಿರಣ್ ಪೋಷಕರು ದೂರು ಕೊಟ್ಟಿದ್ದಾರೆ. ಪ್ರೇಯಸಿ ಹಾಗೂ ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.</p>.<p> <strong>₹40 ಲಕ್ಷ ಸಾಲ ತೀರಿಸಿದ್ದ...</strong></p><p> ‘ಮೂಟೆ ಹೊತ್ತು ಮಕ್ಕಳನ್ನು ಸಾಕಿದ್ದೆ. ಎಡಗೈ ತುಂಡಾಗಿದ್ದರೂ ಮಕ್ಕಳನ್ನು ಚೆನ್ನಾಗಿ ಸಾಕಿದ್ದೆ. ಇದೆಲ್ಲಾ ಗೊತ್ತಿದ್ದರೂ ಮಗ ಕಿರಣ್ ಪ್ರೀತಿಸಿದ ಹುಡುಗಿಗಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಪ್ರೇಯಸಿಯ ಕುಟುಂಬದವರ ಸುಮಾರು ₹40 ಲಕ್ಷ ಸಾಲ ತೀರಿಸಿದ್ದ. ಆದರೆ ಆಕೆ ಪ್ರೀತಿಯ ನಾಟಕವಾಡಿ ಮಗನಿಗೆ ಮೋಸ ಮಾಡಿದ್ದಾಳೆ. ಆಕೆಗೆ ಶಿಕ್ಷೆಯಾಗಬೇಕು’ ಎಂದು ಶ್ರೀಧರ್ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆ ನಿಶ್ಚಯಮಾಡಿಕೊಂಡ ಕಾರಣ ಮನನೊಂದ ಜಿಮ್ ತರಬೇತುದಾರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಗೆಳೆಯರ ಬಳಗ ಬಡಾವಣೆಯ ನಿವಾಸಿ ಶ್ರೀಧರ್ ಅವರ ಮಗ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡವರು.</p>.<p>ಜಿಮ್ ತರಬೇತುದಾರರಾಗಿದ್ದ ಕಿರಣ್, ರಾಜ್ಯಮಟ್ಟದ ದೇಹದಾರ್ಢ್ಯ ಪಟುವಾಗಿದ್ದರು. ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆ ಯುವತಿ ಏಳೆಂಟು ತಿಂಗಳ ಹಿಂದೆ ಕಿರಣ್ ಮನೆಗೆ ಬಂದು ಪೋಷಕರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿ ಮದುವೆ ಮಾಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಪೋಷಕರು, ಕಿರಣ್ ಅವರ ಅಣ್ಣನ ಮದುವೆಯ ನಂತರ ಮದುವೆ ಮಾಡಿಸುವುದಾಗಿ ಹೇಳಿ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.</p>.<p>ಈ ನಡುವೆ ಬೇರೊಬ್ಬನ ಜತೆ ತನ್ನ ಮದುವೆ ನಿಶ್ಚಯ ಮಾಡಿಕೊಂಡ ಯುವತಿ, ಕಿರಣ್ಗೆ ವಿವಾಹದ ಆಮಂತ್ರಣ ಪತ್ರಿಕೆ ಕೊಟ್ಟಿದ್ದರು. ಅಲ್ಲದೆ, ವರನ ಕಡೆಯವರು ಮದುವೆಗೆ ಕೊಡಿಸಿದ್ದ ಸೀರೆಯನ್ನು ತೋರಿಸಿದ್ದರು. ಈ ಘಟನೆ ಬಳಿಕ ಆತ ಕುಟುಂಬದ ಸದಸ್ಯರ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.</p>.<p>ಸಾವಿಗೆ ಪ್ರೇಯಸಿಯೇ ಕಾರಣ: ‘ಪ್ರೇಯಸಿ ಬೇರೊಬ್ಬರನ್ನು ಮದುವೆಯಾಗುತ್ತಿರುವ ವಿಚಾರ ತಿಳಿದು ಮಾನಸಿಕವಾಗಿ ಕಿರಣ್ ಕುಗ್ಗಿಹೋಗಿದ್ದರು. ತನ್ನ ಸಾವಿಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಮಗನ ಸಾವಿಗೆ ಆತನ ಪ್ರೇಯಸಿಯೇ ಕಾರಣ ಎಂದು ಕಿರಣ್ ಪೋಷಕರು ದೂರು ಕೊಟ್ಟಿದ್ದಾರೆ. ಪ್ರೇಯಸಿ ಹಾಗೂ ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.</p>.<p> <strong>₹40 ಲಕ್ಷ ಸಾಲ ತೀರಿಸಿದ್ದ...</strong></p><p> ‘ಮೂಟೆ ಹೊತ್ತು ಮಕ್ಕಳನ್ನು ಸಾಕಿದ್ದೆ. ಎಡಗೈ ತುಂಡಾಗಿದ್ದರೂ ಮಕ್ಕಳನ್ನು ಚೆನ್ನಾಗಿ ಸಾಕಿದ್ದೆ. ಇದೆಲ್ಲಾ ಗೊತ್ತಿದ್ದರೂ ಮಗ ಕಿರಣ್ ಪ್ರೀತಿಸಿದ ಹುಡುಗಿಗಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಪ್ರೇಯಸಿಯ ಕುಟುಂಬದವರ ಸುಮಾರು ₹40 ಲಕ್ಷ ಸಾಲ ತೀರಿಸಿದ್ದ. ಆದರೆ ಆಕೆ ಪ್ರೀತಿಯ ನಾಟಕವಾಡಿ ಮಗನಿಗೆ ಮೋಸ ಮಾಡಿದ್ದಾಳೆ. ಆಕೆಗೆ ಶಿಕ್ಷೆಯಾಗಬೇಕು’ ಎಂದು ಶ್ರೀಧರ್ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>