ಎಚ್ಚೆಸ್ಕೆ ಅವರ ‘ಸಮಗ್ರ ಪ್ರಬಂಧಗಳು’, ‘ಬ್ಯಾಂಕಿಂಗ್ ಪ್ರಪಂಚದ ಸಂಪಾದಕೀಯಗಳು’ ಕೃತಿಯ ‘ಕೇಳು ಪುಸ್ತಕ’ ಆವೃತ್ತಿಯನ್ನು ರೂಪಿಸಿ, ಯೂಟ್ಯೂಬ್ನಲ್ಲಿ ಪ್ರಚುರಪಡಿಸಿದ ಎಚ್.ಎಲ್. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್. ರವೀಂದ್ರ ಅವರು ಬ್ಯಾಂಕಿಂಗ್ ಕನ್ನಡಕ್ಕೆ ಎಚ್ಚೆಸ್ಕೆ ಅವರ ಕೊಡುಗೆಯ ಬಗ್ಗೆ ವಿವರಿಸಿದರು.