<p><strong>ಬೆಂಗಳೂರು:</strong> ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಎಚ್ಚೆಸ್ಕೆ ಬೆಳಕು ಒಂಬತ್ತನೆ ಆವೃತ್ತಿ’ ಕಾರ್ಯಕ್ರಮದಲ್ಲಿ ‘ಕನ್ನಡದಲ್ಲಿ ಬ್ಯಾಂಕಿಂಗ್’ ಮತ್ತು ‘ಬ್ಯಾಂಕಿಂಗ್ನಲ್ಲಿ ಕನ್ನಡ’ವನ್ನು ತರಲು ಶ್ರಮಿಸಿದ್ದ ಅಂಕಣಕಾರ ಹಾಗೂ ನಿಘಂಟು ತಜ್ಞ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಅವರನ್ನು ಸ್ಮರಿಸಲಾಯಿತು. </p>.<p>ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕಿಶನ್ ಶರ್ಮಾ ಚಾಲನೆ ನೀಡಿ, ಕನ್ನಡದಲ್ಲಿ ಶುಭ ಹಾರೈಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ಶಾಂತಾರಾಮ ಪೈ ಪ್ರತಿಷ್ಠಾನದ ಜಾಲತಾಣಕ್ಕೆ ಚಾಲನೆಗೆ ನೀಡಿದರು. </p>.<p>ಎಚ್ಚೆಸ್ಕೆ ಅವರ ‘ಸಮಗ್ರ ಪ್ರಬಂಧಗಳು’, ‘ಬ್ಯಾಂಕಿಂಗ್ ಪ್ರಪಂಚದ ಸಂಪಾದಕೀಯಗಳು’ ಕೃತಿಯ ‘ಕೇಳು ಪುಸ್ತಕ’ ಆವೃತ್ತಿಯನ್ನು ರೂಪಿಸಿ, ಯೂಟ್ಯೂಬ್ನಲ್ಲಿ ಪ್ರಚುರಪಡಿಸಿದ ಎಚ್.ಎಲ್. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್. ರವೀಂದ್ರ ಅವರು ಬ್ಯಾಂಕಿಂಗ್ ಕನ್ನಡಕ್ಕೆ ಎಚ್ಚೆಸ್ಕೆ ಅವರ ಕೊಡುಗೆಯ ಬಗ್ಗೆ ವಿವರಿಸಿದರು. </p>.<p>‘ಎಚ್ಚೆಸ್ಕೆ ಅವರ ಸಮಗ್ರ ಲಲಿತ ಪ್ರಬಂಧಗಳ ವೈಶಿಷ್ಟ್ಯ’ದ ಬಗ್ಗೆ ಲೋಲಾಕ್ಷಿ ಕೆರೊಡಿ, 'ಭಾರತೀಯ ಬ್ಯಾಂಕಿಂಗ್: ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಸವಾಲುಗಳು’ ವಿಷಯದ ಬಗ್ಗೆ ಎಚ್. ಶ್ರೀಧರ ರಾವ್ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಎಚ್ಚೆಸ್ಕೆ ಬೆಳಕು ಒಂಬತ್ತನೆ ಆವೃತ್ತಿ’ ಕಾರ್ಯಕ್ರಮದಲ್ಲಿ ‘ಕನ್ನಡದಲ್ಲಿ ಬ್ಯಾಂಕಿಂಗ್’ ಮತ್ತು ‘ಬ್ಯಾಂಕಿಂಗ್ನಲ್ಲಿ ಕನ್ನಡ’ವನ್ನು ತರಲು ಶ್ರಮಿಸಿದ್ದ ಅಂಕಣಕಾರ ಹಾಗೂ ನಿಘಂಟು ತಜ್ಞ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಅವರನ್ನು ಸ್ಮರಿಸಲಾಯಿತು. </p>.<p>ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕಿಶನ್ ಶರ್ಮಾ ಚಾಲನೆ ನೀಡಿ, ಕನ್ನಡದಲ್ಲಿ ಶುಭ ಹಾರೈಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ಶಾಂತಾರಾಮ ಪೈ ಪ್ರತಿಷ್ಠಾನದ ಜಾಲತಾಣಕ್ಕೆ ಚಾಲನೆಗೆ ನೀಡಿದರು. </p>.<p>ಎಚ್ಚೆಸ್ಕೆ ಅವರ ‘ಸಮಗ್ರ ಪ್ರಬಂಧಗಳು’, ‘ಬ್ಯಾಂಕಿಂಗ್ ಪ್ರಪಂಚದ ಸಂಪಾದಕೀಯಗಳು’ ಕೃತಿಯ ‘ಕೇಳು ಪುಸ್ತಕ’ ಆವೃತ್ತಿಯನ್ನು ರೂಪಿಸಿ, ಯೂಟ್ಯೂಬ್ನಲ್ಲಿ ಪ್ರಚುರಪಡಿಸಿದ ಎಚ್.ಎಲ್. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್. ರವೀಂದ್ರ ಅವರು ಬ್ಯಾಂಕಿಂಗ್ ಕನ್ನಡಕ್ಕೆ ಎಚ್ಚೆಸ್ಕೆ ಅವರ ಕೊಡುಗೆಯ ಬಗ್ಗೆ ವಿವರಿಸಿದರು. </p>.<p>‘ಎಚ್ಚೆಸ್ಕೆ ಅವರ ಸಮಗ್ರ ಲಲಿತ ಪ್ರಬಂಧಗಳ ವೈಶಿಷ್ಟ್ಯ’ದ ಬಗ್ಗೆ ಲೋಲಾಕ್ಷಿ ಕೆರೊಡಿ, 'ಭಾರತೀಯ ಬ್ಯಾಂಕಿಂಗ್: ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಸವಾಲುಗಳು’ ವಿಷಯದ ಬಗ್ಗೆ ಎಚ್. ಶ್ರೀಧರ ರಾವ್ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>