ಟ್ವೀಟ್ನಲ್ಲಿ ಏನಿತ್ತು?
‘ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆಗೆ ತೆರಳಿದ್ದೆ. ಪಿಎಸ್ಐ ಕ್ಯಾಬಿನ್ನಲ್ಲಿ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಅವರು ಸ್ನೇಹಿಯಾಗಿಯೇ ಮಾತನಾಡಿದ್ದರು. ನಂತರ, ಅವರ ಉದ್ದೇಶ ಅರ್ಥವಾಯಿತು. ನನ್ನ ಜತೆಗೆ ಕೆಟ್ಟದಾಗಿ ನಡೆದುಕೊಂಡರು. ಹೇಳಿಕೆ ಪಡೆಯುವಾಗ ನನ್ನ ಕೈಹಿಡಿದು ಎಳೆದರು ಹಾಗೂ ದೇಹವನ್ನು ಸ್ಪರ್ಶಿಸಿದರು. ಆಗ ಭಯಪಟ್ಟುಕೊಂಡೆ. ಬಳಿಕ, ಮೊಬೈಲ್ ನಂಬರ್ ತೆಗೆದುಕೊಂಡು ಕರೆ ಮಾಡಲು ಹೇಳಿದರು’ ಎಂದು ಟ್ವೀಟ್ನಲ್ಲಿ ಆಕೆ ಅಳಲು ತೋಡಿಕೊಂಡಿದ್ದರು.