<p><strong>ಬೆಂಗಳೂರು</strong>: ‘ಆರೋಗ್ಯ ಸೇವೆ, ಸೌಲಭ್ಯ ಎಂಬುದು ಸವಲತ್ತು ಮಾತ್ರವಲ್ಲ, ಯಾವುದೇ ವ್ಯಕ್ತಿಯ ಪರಿಸ್ಥಿತಿಯನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಸಿಗಬೇಕಾದ ಹಕ್ಕು’ ಎಂದು ನಟ ಡಾಲಿ ಧನಂಜಯ ಅಭಿಪ್ರಾಯಪಟ್ಟರು.</p>.<p>‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಒಪನ್ ಟೆಕ್ಸ್ಟ್ ಆಯೋಜಿಸಿದ್ದ ‘ಸಮರ್ಥನಂ ಬೆಂಗಳೂರು ವಾಕಥಾನ್’ನ 18ನೇ ಆವೃತ್ತಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಯಾವುದೇ ನಾಗರಿಕ ಆರೋಗ್ಯ ಆರೈಕೆ ಸೌಲಭ್ಯದಿಂದ ದೂರ ಉಳಿಯದಂತೆ ನಾವೆಲ್ಲರೂ ಹೆಜ್ಜೆ ಇರಿಸಬೇಕು. ಪ್ರತಿಯೊಬ್ಬರೂ ಘನತೆಯಿಂದ ಜೀವಿಸುವಂತಾಗಬೇಕು. ನಾವೆಲ್ಲರೂ ಒಟ್ಟಾದರೆ ಎಲ್ಲ ರೀತಿಯ ಅಡೆತಡೆಗಳನ್ನು ಮುರಿಯಬಹುದು. ಆರೋಗ್ಯ ಮತ್ತು ಯೋಗ–ಕ್ಷೇಮವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು. ಈ ವಾಕಥಾನ್ ಕೇವಲ ನಡೆಯಷ್ಟೇ ಅಲ್ಲ, ಹೃದಯ ಮತ್ತು ಮೆದುಳನ್ನು ಉತ್ತಮ ನಾಳೆಗಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಚಲನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಆರೋಗ್ಯ ಸೇವೆಗಳು ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು. ಅಂಗವಿಕಲರಿಗೆ ಆರೋಗ್ಯ ಸೇವೆ ಅತ್ಯಂತ ಪ್ರಮುಖವಾದದ್ದು’ ಎಂದು ಶಾಸಕ ಸಿ.ಕೆ. ರಾಮಮೂರ್ತಿ ಹೇಳಿದರು.</p>.<p>ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಾಕಥಾನ್ ಸ್ಫೂರ್ತಿಯುತವಾಗಿ ಮುಂದುವರಿದಿದೆ. ಈ ವರ್ಷ ‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಆರೋಗ್ಯ ಸೇವೆಗಳ ಅಗತ್ಯ ಮತ್ತು ಅವುಗಳ ಲಭ್ಯತೆ ಬಗ್ಗೆ ಸಮರ್ಥನಂ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ವಿಷಯದಲ್ಲಿನ ನಿರ್ಲಕ್ಷ್ಯದಿಂದ ಕುಟುಂಬದ ಪ್ರೀತಿಪಾತ್ರರನ್ನು ಹಲವರು ಕಳೆದುಕೊಂಡಿದ್ದಾರೆ. ಆದ್ದರಿಂದ ಆರೋಗ್ಯ ಸೇವೆಗಳು ಎಲ್ಲರಿಗೂ ಲಭ್ಯವಾಗುವುದು ಅತಿಮುಖ್ಯವಾದದ್ದು’ ಎಂದು ಹೇಳಿದರು.</p>.<p>ಒಪನ್ಟೆಕ್ಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್ಪಾಲ್, ಉಪಾಧ್ಯಕ್ಷ ಎಸ್. ಗುರುಪ್ರಸಾದ್, ಬ್ಲ್ಯೂಯಾಂಡರ್ನ ಸತೀಶ್ ಕುಮಾರ್, ಸಿಎಸ್ಸಿ ಐಟಿ ಗ್ಲೋಬಲ್ ಫಂಡ್ ಸಲ್ಯೂಷನ್ನ ಆನಂದ್ ಕೈಲಾಶ್, ಬಿಬಿಎಂಪಿ ಮಾಜಿ ಸದಸ್ಯ ಎನ್. ನಾಗರಾಜು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಆರೋಗ್ಯ ಸೇವೆ, ಸೌಲಭ್ಯ ಎಂಬುದು ಸವಲತ್ತು ಮಾತ್ರವಲ್ಲ, ಯಾವುದೇ ವ್ಯಕ್ತಿಯ ಪರಿಸ್ಥಿತಿಯನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಸಿಗಬೇಕಾದ ಹಕ್ಕು’ ಎಂದು ನಟ ಡಾಲಿ ಧನಂಜಯ ಅಭಿಪ್ರಾಯಪಟ್ಟರು.</p>.<p>‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಒಪನ್ ಟೆಕ್ಸ್ಟ್ ಆಯೋಜಿಸಿದ್ದ ‘ಸಮರ್ಥನಂ ಬೆಂಗಳೂರು ವಾಕಥಾನ್’ನ 18ನೇ ಆವೃತ್ತಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಯಾವುದೇ ನಾಗರಿಕ ಆರೋಗ್ಯ ಆರೈಕೆ ಸೌಲಭ್ಯದಿಂದ ದೂರ ಉಳಿಯದಂತೆ ನಾವೆಲ್ಲರೂ ಹೆಜ್ಜೆ ಇರಿಸಬೇಕು. ಪ್ರತಿಯೊಬ್ಬರೂ ಘನತೆಯಿಂದ ಜೀವಿಸುವಂತಾಗಬೇಕು. ನಾವೆಲ್ಲರೂ ಒಟ್ಟಾದರೆ ಎಲ್ಲ ರೀತಿಯ ಅಡೆತಡೆಗಳನ್ನು ಮುರಿಯಬಹುದು. ಆರೋಗ್ಯ ಮತ್ತು ಯೋಗ–ಕ್ಷೇಮವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು. ಈ ವಾಕಥಾನ್ ಕೇವಲ ನಡೆಯಷ್ಟೇ ಅಲ್ಲ, ಹೃದಯ ಮತ್ತು ಮೆದುಳನ್ನು ಉತ್ತಮ ನಾಳೆಗಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಚಲನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಆರೋಗ್ಯ ಸೇವೆಗಳು ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು. ಅಂಗವಿಕಲರಿಗೆ ಆರೋಗ್ಯ ಸೇವೆ ಅತ್ಯಂತ ಪ್ರಮುಖವಾದದ್ದು’ ಎಂದು ಶಾಸಕ ಸಿ.ಕೆ. ರಾಮಮೂರ್ತಿ ಹೇಳಿದರು.</p>.<p>ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಾಕಥಾನ್ ಸ್ಫೂರ್ತಿಯುತವಾಗಿ ಮುಂದುವರಿದಿದೆ. ಈ ವರ್ಷ ‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಆರೋಗ್ಯ ಸೇವೆಗಳ ಅಗತ್ಯ ಮತ್ತು ಅವುಗಳ ಲಭ್ಯತೆ ಬಗ್ಗೆ ಸಮರ್ಥನಂ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ವಿಷಯದಲ್ಲಿನ ನಿರ್ಲಕ್ಷ್ಯದಿಂದ ಕುಟುಂಬದ ಪ್ರೀತಿಪಾತ್ರರನ್ನು ಹಲವರು ಕಳೆದುಕೊಂಡಿದ್ದಾರೆ. ಆದ್ದರಿಂದ ಆರೋಗ್ಯ ಸೇವೆಗಳು ಎಲ್ಲರಿಗೂ ಲಭ್ಯವಾಗುವುದು ಅತಿಮುಖ್ಯವಾದದ್ದು’ ಎಂದು ಹೇಳಿದರು.</p>.<p>ಒಪನ್ಟೆಕ್ಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್ಪಾಲ್, ಉಪಾಧ್ಯಕ್ಷ ಎಸ್. ಗುರುಪ್ರಸಾದ್, ಬ್ಲ್ಯೂಯಾಂಡರ್ನ ಸತೀಶ್ ಕುಮಾರ್, ಸಿಎಸ್ಸಿ ಐಟಿ ಗ್ಲೋಬಲ್ ಫಂಡ್ ಸಲ್ಯೂಷನ್ನ ಆನಂದ್ ಕೈಲಾಶ್, ಬಿಬಿಎಂಪಿ ಮಾಜಿ ಸದಸ್ಯ ಎನ್. ನಾಗರಾಜು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>