ಟಿ.ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ, ಸುಂಕದಕಟ್ಟೆ, ಯಶವಂತಪುರ, ನಾಗಸಂದ್ರ, ನೆಲಮಂಗಲ ವ್ಯಾಪ್ತಿ, ಮರಿಯಪ್ಪನಪಾಳ್ಯ, ಬಿ.ಇ.ಎಲ್, ಮತ್ತೀಕೆರೆ ಹಾಗೂ ದೇವನಹಳ್ಳಿ ಭಾಗದಲ್ಲಿ ಜೋರು ಗುರುವಾರ ರಾತ್ರಿಯಿಡೀ ರಭಸವಾಗಿ ಮಳೆ ಸುರಿದಿತ್ತು. ದೀಪಾಂಜಲಿ ನಗರ, ಜ್ಞಾನಭಾರತಿ, ವಿಧಾನಸೌಧದ ಸುತ್ತಮುತ್ತ, ಮೆಜಿಸ್ಟಿಕ್, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್, ಬನಶಂಕರಿ ಸೇರಿದಂತೆ ನಗರದ ಹಲವು ಕಡೆ ಮಳೆಯಾಗಿದೆ. ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತು.