<p><strong>ಹೆಸರಘಟ್ಟ: </strong>ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಮುಂದಾಗಿದ್ದು, ನೂರಾರು ಟ್ರ್ಯಾಕ್ಟರ್ಗಳಲ್ಲಿ ರೈತರು ರಾಗಿ ಹೊತ್ತು ತರುತ್ತಿದ್ದಾರೆ. ಆದರೆ, ಅಧಿಕಾರಿಗಳು ದಿನಕ್ಕೆ ಐದರಿಂದ ಆರು ಟ್ರ್ಯಾಕ್ಟರ್ನಷ್ಟು ರಾಗಿ ಮಾತ್ರ ಖರೀದಿಸುತ್ತಿದ್ದು, ರೈತರು ಬಿಸಿಲಿನಲ್ಲಿಯೇ ದಿನಗಟ್ಟಲೇ ಕಾಯಬೇಕಾಗಿದೆ.</p>.<p>‘ಕುರುಬರಹಳ್ಳಿ ಗ್ರಾಮದಲ್ಲಿ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಅಧಿಕಾರಿಗಳು ಬೆಳಿಗ್ಗೆ ಹತ್ತಕ್ಕೆ ಬಂದು, ಸಂಜೆ ಐದು ಗಂಟೆಗೆಲ್ಲ ಹೋಗುತ್ತಾರೆ. ದಿನಕ್ಕೆ ಐದಾರು ಟ್ರ್ಯಾಕ್ಟರ್ ರಾಗಿ ಮಾತ್ರ ತೂಕಕ್ಕೆ ಹಾಕುತ್ತಾರೆ. ಹೆಚ್ಚು ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೆಸರಘಟ್ಟ ವಲಯದ ಅಧ್ಯಕ್ಷ ಎಸ್.ಜಯಣ್ಣ ಒತ್ತಾಯಿಸಿದರು.</p>.<p>‘ಹೋಬಳಿಯ ಶಾನುಭೋಗನಹಳ್ಳಿ, ಕಾಕೋಳು, ರಾಜಾನುಕುಂಟೆ, ಮತ್ಕೂರು, ದಿಬ್ಬೂರು ಗ್ರಾಮಗಳಿಂದ ರೈತರು ರಾಗಿ ತರುತ್ತಿದ್ದು, ಒಂದು ದಿನಕ್ಕೆ ಟ್ರ್ಯಾಕ್ಟರ್ ಬಾಡಿಗೆಯೇ ₹2,000 ಇದೆ. ಆ ದಿನ ಅವರ ಸರದಿ ಬಾರದಿದ್ದರೆ ಟ್ರ್ಯಾಕ್ಟರ್ ಬಾಡಿಗೆಯೂ ಹೆಚ್ಚಾಗುತ್ತದೆ. ಬೆಂಬಲ ಬೆಲೆಯಲ್ಲಿ ಶೇಕಡಾ ಕಾಲುಭಾಗದಷ್ಟು ಟ್ಯಾಕ್ಟರ್ ಬಾಡಿಗೆಗೇ ಹೋದರೆ, ರೈತರಿಗೆ ಲಾಭ ಸಿಗುವುದೇ ಇಲ್ಲ’ ಎಂದು ಅವರು ಹೇಳಿದರು.</p>.<p>‘ನಾನು ರಾಗಿ ತಂದು ಎರಡು ದಿನ ಆಯಿತು. ಹತ್ತು ಕ್ವಿಂಟಲ್ ರಾಗಿ ಇದೆ. ಟ್ಯಾಕ್ಟರ್ ಅನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಇಲ್ಲೇ ಉಳಿದಿದ್ದೇವೆ. ಕುಡಿಯಲು, ಮುಖ ತೊಳೆಯಲು ಕೂಡ ನೀರಿಲ್ಲ’ ಎಂದು ರಾಜಾನುಕುಂಟೆ ಗ್ರಾಮದ ರೈತ ಚಂದ್ರಶೇಖರ್ ಅಳಲು ತೊಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ: </strong>ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಮುಂದಾಗಿದ್ದು, ನೂರಾರು ಟ್ರ್ಯಾಕ್ಟರ್ಗಳಲ್ಲಿ ರೈತರು ರಾಗಿ ಹೊತ್ತು ತರುತ್ತಿದ್ದಾರೆ. ಆದರೆ, ಅಧಿಕಾರಿಗಳು ದಿನಕ್ಕೆ ಐದರಿಂದ ಆರು ಟ್ರ್ಯಾಕ್ಟರ್ನಷ್ಟು ರಾಗಿ ಮಾತ್ರ ಖರೀದಿಸುತ್ತಿದ್ದು, ರೈತರು ಬಿಸಿಲಿನಲ್ಲಿಯೇ ದಿನಗಟ್ಟಲೇ ಕಾಯಬೇಕಾಗಿದೆ.</p>.<p>‘ಕುರುಬರಹಳ್ಳಿ ಗ್ರಾಮದಲ್ಲಿ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಅಧಿಕಾರಿಗಳು ಬೆಳಿಗ್ಗೆ ಹತ್ತಕ್ಕೆ ಬಂದು, ಸಂಜೆ ಐದು ಗಂಟೆಗೆಲ್ಲ ಹೋಗುತ್ತಾರೆ. ದಿನಕ್ಕೆ ಐದಾರು ಟ್ರ್ಯಾಕ್ಟರ್ ರಾಗಿ ಮಾತ್ರ ತೂಕಕ್ಕೆ ಹಾಕುತ್ತಾರೆ. ಹೆಚ್ಚು ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೆಸರಘಟ್ಟ ವಲಯದ ಅಧ್ಯಕ್ಷ ಎಸ್.ಜಯಣ್ಣ ಒತ್ತಾಯಿಸಿದರು.</p>.<p>‘ಹೋಬಳಿಯ ಶಾನುಭೋಗನಹಳ್ಳಿ, ಕಾಕೋಳು, ರಾಜಾನುಕುಂಟೆ, ಮತ್ಕೂರು, ದಿಬ್ಬೂರು ಗ್ರಾಮಗಳಿಂದ ರೈತರು ರಾಗಿ ತರುತ್ತಿದ್ದು, ಒಂದು ದಿನಕ್ಕೆ ಟ್ರ್ಯಾಕ್ಟರ್ ಬಾಡಿಗೆಯೇ ₹2,000 ಇದೆ. ಆ ದಿನ ಅವರ ಸರದಿ ಬಾರದಿದ್ದರೆ ಟ್ರ್ಯಾಕ್ಟರ್ ಬಾಡಿಗೆಯೂ ಹೆಚ್ಚಾಗುತ್ತದೆ. ಬೆಂಬಲ ಬೆಲೆಯಲ್ಲಿ ಶೇಕಡಾ ಕಾಲುಭಾಗದಷ್ಟು ಟ್ಯಾಕ್ಟರ್ ಬಾಡಿಗೆಗೇ ಹೋದರೆ, ರೈತರಿಗೆ ಲಾಭ ಸಿಗುವುದೇ ಇಲ್ಲ’ ಎಂದು ಅವರು ಹೇಳಿದರು.</p>.<p>‘ನಾನು ರಾಗಿ ತಂದು ಎರಡು ದಿನ ಆಯಿತು. ಹತ್ತು ಕ್ವಿಂಟಲ್ ರಾಗಿ ಇದೆ. ಟ್ಯಾಕ್ಟರ್ ಅನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಇಲ್ಲೇ ಉಳಿದಿದ್ದೇವೆ. ಕುಡಿಯಲು, ಮುಖ ತೊಳೆಯಲು ಕೂಡ ನೀರಿಲ್ಲ’ ಎಂದು ರಾಜಾನುಕುಂಟೆ ಗ್ರಾಮದ ರೈತ ಚಂದ್ರಶೇಖರ್ ಅಳಲು ತೊಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>