‘ಮಳೆ ಮುಗಿದ ಬಳಿಕ ಅನುದಾನ ಲಭ್ಯವಾದರೆ ಕಾಮಗಾರಿ ನಡೆಸಲಾಗುವುದು’ ಎಂದು ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು. ‘ಅನುದಾನದ ಲಭ್ಯತೆ ಬಗ್ಗೆ ಸಬೂಬು ಹೇಳದೆ ರಸ್ತೆ ನಿರ್ಮಿಸುವುದು ಪಾಲಿಕೆ ಜವಾಬ್ದಾರಿ’ ಎಂದು ಪೀಠ ಹೇಳಿತು. ಕಾಮಗಾರಿ ಪ್ರಗತಿ ಬಗ್ಗೆ ಜನವರಿ ವೇಳೆಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.