<p>ಬೆಂಗಳೂರು: ‘ಭಾರತೀಯ ಚಿತ್ರೋದ್ಯಮ ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಇನ್ನಷ್ಟು ವೃದ್ಧಿಸಬಹುದು’ ಎಂದು ಬೆಂಗಳೂರಿನ ಕೆನಡಾದ ರಾಯಭಾರ ಕಚೇರಿಯ ಮುಖ್ಯಸ್ಥ ಬೆನೋಯ್ಟ್ ಪ್ರಿಫಾಂಟೈನ್ ಅಭಿಪ್ರಾಯಪಟ್ಟರು.</p>.<p>ನಗರದ ಮಾರತಹಳ್ಳಿಯ ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ನಲ್ಲಿ<br />ನಡೆಯುತ್ತಿರುವ ‘ಐದನೇ ಇನ್ನೋವೇಟಿವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಭಾರತ ಮತ್ತು ಕೆನಡಾ 2014ರಿಂದ ಚಲನಚಿತ್ರಗಳ ಸಹ-ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಕೆನಡಾದಲ್ಲಿ ಚಲನಚಿತ್ರ ಚಿತ್ರೀಕರಿಸಲು ಅನೇಕ ಭಾರತೀಯ ನಿರ್ಮಾಪಕರಿಗೆ ನೆರವಾಯಿತು. ಕೆನಡಾದಲ್ಲಿರುವ ಸುಮಾರು 14 ಲಕ್ಷ ಜನರು ಭಾರತೀಯ ಮೂಲದವರು. ಹಾಗಾಗಿ ಎರಡು ದೇಶಗಳ ನಡುವೆ ಬಲವಾದ ಸಂಪರ್ಕವಿದೆ. ಈ ನಿಟ್ಟಿನಲ್ಲಿ ಪ್ರಬಲವಾದ ಆರ್ಥಿಕತೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಅಗತ್ಯವಿದೆ. ಚಲನಚಿತ್ರ ಉದ್ಯಮ ಈ ನಿಟ್ಟಿನಲ್ಲಿ ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತರುವ ಆಧಾರ ಸ್ತಂಭವಾಗಬಲ್ಲದು’ ಎಂದರು.</p>.<p>ಅಬುಧಾಬಿ ಫಿಲ್ಮ್ ಕಮಿಷನ್ನ ಆಯುಕ್ತ ಹ್ಯಾನ್ಸ್ ಫ್ರೈಕಿನ್ ಮಾತನಾಡಿ, ‘ಭಾರತದ ಚಿತ್ರ ನಿರ್ಮಾಪಕರಿಗೆ ಚಿತ್ರೀಕರಣಕ್ಕೆ ಸಂಬಂಧಿಸಿ ಅಬುಧಾಬಿಯು ಅತಿದೊಡ್ಡ ಪಾಲುದಾರ. ಈ ಸಹಯೋಗದಿಂದಾಗಿ ಚಿತ್ರೋದ್ಯಮದಲ್ಲಿ ಸುಮಾರು 6 ಸಾವಿರ ಕೋಟಿ ಡಾಲರ್ಗಳಷ್ಟು ವ್ಯವಹಾರ ನಡೆಯಿತು. ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯ ಶಾಖೆಯನ್ನು ಅಬುಧಾಬಿಯಲ್ಲಿ ತೆರೆಯಲಾಗಿದೆ’ ಎಂದರು.</p>.<p>ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಮಾತನಾಡಿ, ‘ದಕ್ಷಿಣ ಭಾರತದಿಂದ ನಿರ್ಮಾಣಗೊಂಡ ಪ್ಯಾನ್ ಇಂಡಿಯಾ ಚಲನಚಿತ್ರಗಳ ಇತ್ತೀಚಿನ ಸರಣಿ ಯಶಸ್ಸನ್ನು ಗಮನಿಸಿದರೆ ಚಲನಚಿತ್ರ ನಿರ್ಮಾಪಕರು ದಕ್ಷಿಣದತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಭಾರತದಲ್ಲಿ ಏಕತೆರೆಯ ಚಿತ್ರಮಂದಿರಗಳ ಸಂಖ್ಯೆ 12 ಸಾವಿರದಿಂದ 8 ಸಾವಿರಕ್ಕೆ ಇಳಿದಿದೆ. ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕು. ಹೀಗಾದಾಗ ಗ್ರಾಮೀಣ ಭಾರತದ ಪ್ರೇಕ್ಷಕರು ಹೆಚ್ಚು ಪ್ರಮಾಣದಲ್ಲಿ ಚಿತ್ರಗಳನ್ನು ವೀಕ್ಷಿಸಬಹುದು’ ಎಂದರು.</p>.<p>ಕೇಂದ್ರವು ಚಲನಚಿತ್ರೋದ್ಯಮವನ್ನು ಆದ್ಯತೆಯ ಕ್ಷೇತ್ರವೆಂದು ಪರಿಗಣಿಸಿದೆ. ಚಲನಚಿತ್ರ ನಿರ್ಮಾಪಕರಿಗೆ ಪ್ರೋತ್ಸಾಹಧನ ನೀಡಲು ₹ 450 ಕೋಟಿ ಮೀಸಲಿಟ್ಟಿದೆ. ಒಟ್ಟು ಯೋಜನಾ ವೆಚ್ಚದ ಸುಮಾರು ಶೇ 40 ಅಥವಾ ₹ 2.50 ಕೋಟಿಯನ್ನು ವಿದೇಶದಲ್ಲಿ ಚಿತ್ರೀಕರಿಸುವ ಚಲನಚಿತ್ರ ಉದ್ಯಮಗಳ ಸಹಯೋಗಕ್ಕಾಗಿ ಪ್ರೋತ್ಸಾಹಧನವಾಗಿ ನೀಡಲಾಗಿದೆ. ಸರ್ಕಾರವು ಈಗಾಗಲೇ 15 ಸಹನಿರ್ಮಾಣ ಒಪ್ಪಂದಗಳಿಗೆ ಸಹಿ ಹಾಕಿದೆ. ಹೆಚ್ಚಿನ ಒಪ್ಪಂದಗಳಿಗೆ ಸಹಿ ಹಾಕಲು ಮುಂದಿನ ವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದರು.</p>.<p>ದಕ್ಷಿಣ ಭಾರತದ ಇಸ್ರೇಲ್ನ ದಕ್ಷಿಣ ಭಾರತದ ದೂತಾವಾಸದ ಮುಖ್ಯಸ್ಥ ಕಾನ್ಸುಲ್ ಜನರಲ್ ಟಾಮಿ ಬೆನ್ ಹೈಮ್, ನಿರ್ದೇಶಕ ಸಬ್ಬಾಸ್ ಜೋಸೆಫ್, ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿದರು.</p>.<p>ಈ ಚಿತ್ರೋತ್ಸವದಲ್ಲಿ 40 ದೇಶಗಳ 30 ಭಾಷೆಗಳ 150 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಪರಿಣತರೊಂದಿಗೆ ಸಂವಾದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಭಾರತೀಯ ಚಿತ್ರೋದ್ಯಮ ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಇನ್ನಷ್ಟು ವೃದ್ಧಿಸಬಹುದು’ ಎಂದು ಬೆಂಗಳೂರಿನ ಕೆನಡಾದ ರಾಯಭಾರ ಕಚೇರಿಯ ಮುಖ್ಯಸ್ಥ ಬೆನೋಯ್ಟ್ ಪ್ರಿಫಾಂಟೈನ್ ಅಭಿಪ್ರಾಯಪಟ್ಟರು.</p>.<p>ನಗರದ ಮಾರತಹಳ್ಳಿಯ ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ನಲ್ಲಿ<br />ನಡೆಯುತ್ತಿರುವ ‘ಐದನೇ ಇನ್ನೋವೇಟಿವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಭಾರತ ಮತ್ತು ಕೆನಡಾ 2014ರಿಂದ ಚಲನಚಿತ್ರಗಳ ಸಹ-ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಕೆನಡಾದಲ್ಲಿ ಚಲನಚಿತ್ರ ಚಿತ್ರೀಕರಿಸಲು ಅನೇಕ ಭಾರತೀಯ ನಿರ್ಮಾಪಕರಿಗೆ ನೆರವಾಯಿತು. ಕೆನಡಾದಲ್ಲಿರುವ ಸುಮಾರು 14 ಲಕ್ಷ ಜನರು ಭಾರತೀಯ ಮೂಲದವರು. ಹಾಗಾಗಿ ಎರಡು ದೇಶಗಳ ನಡುವೆ ಬಲವಾದ ಸಂಪರ್ಕವಿದೆ. ಈ ನಿಟ್ಟಿನಲ್ಲಿ ಪ್ರಬಲವಾದ ಆರ್ಥಿಕತೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಅಗತ್ಯವಿದೆ. ಚಲನಚಿತ್ರ ಉದ್ಯಮ ಈ ನಿಟ್ಟಿನಲ್ಲಿ ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತರುವ ಆಧಾರ ಸ್ತಂಭವಾಗಬಲ್ಲದು’ ಎಂದರು.</p>.<p>ಅಬುಧಾಬಿ ಫಿಲ್ಮ್ ಕಮಿಷನ್ನ ಆಯುಕ್ತ ಹ್ಯಾನ್ಸ್ ಫ್ರೈಕಿನ್ ಮಾತನಾಡಿ, ‘ಭಾರತದ ಚಿತ್ರ ನಿರ್ಮಾಪಕರಿಗೆ ಚಿತ್ರೀಕರಣಕ್ಕೆ ಸಂಬಂಧಿಸಿ ಅಬುಧಾಬಿಯು ಅತಿದೊಡ್ಡ ಪಾಲುದಾರ. ಈ ಸಹಯೋಗದಿಂದಾಗಿ ಚಿತ್ರೋದ್ಯಮದಲ್ಲಿ ಸುಮಾರು 6 ಸಾವಿರ ಕೋಟಿ ಡಾಲರ್ಗಳಷ್ಟು ವ್ಯವಹಾರ ನಡೆಯಿತು. ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯ ಶಾಖೆಯನ್ನು ಅಬುಧಾಬಿಯಲ್ಲಿ ತೆರೆಯಲಾಗಿದೆ’ ಎಂದರು.</p>.<p>ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಮಾತನಾಡಿ, ‘ದಕ್ಷಿಣ ಭಾರತದಿಂದ ನಿರ್ಮಾಣಗೊಂಡ ಪ್ಯಾನ್ ಇಂಡಿಯಾ ಚಲನಚಿತ್ರಗಳ ಇತ್ತೀಚಿನ ಸರಣಿ ಯಶಸ್ಸನ್ನು ಗಮನಿಸಿದರೆ ಚಲನಚಿತ್ರ ನಿರ್ಮಾಪಕರು ದಕ್ಷಿಣದತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಭಾರತದಲ್ಲಿ ಏಕತೆರೆಯ ಚಿತ್ರಮಂದಿರಗಳ ಸಂಖ್ಯೆ 12 ಸಾವಿರದಿಂದ 8 ಸಾವಿರಕ್ಕೆ ಇಳಿದಿದೆ. ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಬೇಕು. ಹೀಗಾದಾಗ ಗ್ರಾಮೀಣ ಭಾರತದ ಪ್ರೇಕ್ಷಕರು ಹೆಚ್ಚು ಪ್ರಮಾಣದಲ್ಲಿ ಚಿತ್ರಗಳನ್ನು ವೀಕ್ಷಿಸಬಹುದು’ ಎಂದರು.</p>.<p>ಕೇಂದ್ರವು ಚಲನಚಿತ್ರೋದ್ಯಮವನ್ನು ಆದ್ಯತೆಯ ಕ್ಷೇತ್ರವೆಂದು ಪರಿಗಣಿಸಿದೆ. ಚಲನಚಿತ್ರ ನಿರ್ಮಾಪಕರಿಗೆ ಪ್ರೋತ್ಸಾಹಧನ ನೀಡಲು ₹ 450 ಕೋಟಿ ಮೀಸಲಿಟ್ಟಿದೆ. ಒಟ್ಟು ಯೋಜನಾ ವೆಚ್ಚದ ಸುಮಾರು ಶೇ 40 ಅಥವಾ ₹ 2.50 ಕೋಟಿಯನ್ನು ವಿದೇಶದಲ್ಲಿ ಚಿತ್ರೀಕರಿಸುವ ಚಲನಚಿತ್ರ ಉದ್ಯಮಗಳ ಸಹಯೋಗಕ್ಕಾಗಿ ಪ್ರೋತ್ಸಾಹಧನವಾಗಿ ನೀಡಲಾಗಿದೆ. ಸರ್ಕಾರವು ಈಗಾಗಲೇ 15 ಸಹನಿರ್ಮಾಣ ಒಪ್ಪಂದಗಳಿಗೆ ಸಹಿ ಹಾಕಿದೆ. ಹೆಚ್ಚಿನ ಒಪ್ಪಂದಗಳಿಗೆ ಸಹಿ ಹಾಕಲು ಮುಂದಿನ ವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದರು.</p>.<p>ದಕ್ಷಿಣ ಭಾರತದ ಇಸ್ರೇಲ್ನ ದಕ್ಷಿಣ ಭಾರತದ ದೂತಾವಾಸದ ಮುಖ್ಯಸ್ಥ ಕಾನ್ಸುಲ್ ಜನರಲ್ ಟಾಮಿ ಬೆನ್ ಹೈಮ್, ನಿರ್ದೇಶಕ ಸಬ್ಬಾಸ್ ಜೋಸೆಫ್, ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿದರು.</p>.<p>ಈ ಚಿತ್ರೋತ್ಸವದಲ್ಲಿ 40 ದೇಶಗಳ 30 ಭಾಷೆಗಳ 150 ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಪರಿಣತರೊಂದಿಗೆ ಸಂವಾದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>