ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ‘ಅನುಭವಾತ್ಮಕ ಕಲಿಕೆಗೆ ನಾವು ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದ್ದು, ಪ್ರತಿ ಯೊಂದು ಮಕ್ಕಳು ಸೃಜನಾತ್ಮಕ ಗುಣ ಗಳನ್ನು ಹೊಂದಿರುತ್ತಾರೆ. ಅದಕ್ಕೆ ಸಾಮಾಜಿಕ ಪರಿಸರವು ಬಹಳ ಪ್ರಮುಖವಾಗಿದ್ದು, ಇಂತಹ ವಾತಾವರಣದಲ್ಲಿ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ಅವರ ಕಲಿಕೆಯನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.