‘ಈ ಅಡುಗೆ ಮನೆಯಿಂದ ಸುಮಾರು 30 ಕ್ಯಾಂಟೀನ್ಗಳಿಗೆ ಸಿದ್ಧ ಆಹಾರ ಪೂರೈಕೆಯಾಗುತ್ತದೆ. ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಮನೆಯನ್ನು ಏಕಾಏಕಿ ತೆರವುಗೊಳಿಸುವುದರಿಂದ ಸರ್ಕಾರದ ಹಣ ವ್ಯರ್ಥವಾಗಲಿದೆ. ಅಡುಗೆ ಮನೆ ಇರುವ ಜಾಗವು ಕರ್ನಾಟಕ ಗೃಹಮಂಡಳಿಗೆ ಸೇರಿದ್ದು ಎಂದು ಈಗ ಹೇಳಲಾಗುತ್ತಿದೆ. ಅಲ್ಲಿ ಅಡುಗೆ ಮನೆ ನಿರ್ಮಿಸಿದ್ದಾದರೂ ಏಕೆ’ ಎಂದು ವಾಜಿದ್ ಪ್ರಶ್ನಿಸಿದರು.