<p><strong>ಬೆಂಗಳೂರು:</strong>‘ಆರ್ಎಸ್ಎಸ್ನವರಿಗೆ ಊಟ ಹಾಕ್ತೀನಿ ಎನ್ನುವ ಡಿ.ಕೆ.ಶಿವಕುಮಾರ್ ಅವರು ಟಾಟಾನಾ– ಬಿರ್ಲಾನಾ’ ಎಂದು ಕಂದಾಯ ಸಚಿವ ಆರ್.ಅಶೋಕ ಲೇವಡಿ ಮಾಡಿದ್ದಾರೆ.</p>.<p>ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಆರ್ಎಸ್ಎಸ್ನವರಿಗೆ ಊಟ ಹಾಕಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದು ಅವರ ಅಹಂಕಾರದ ಪರಮಾವಧಿ. ಸಂಘ ಪರಿವಾರದವರಿಗೆ ಊಟ ಹಾಕಿಸುವ ಅಗತ್ಯವೂ ಇಲ್ಲ ಮತ್ತು ಡಿ.ಕೆಗೆ ನೈತಿಕತೆಯೂ ಇಲ್ಲ’ ಎಂದರು.</p>.<p>‘ಊಟ ಹಾಕಿಸುವುದಿದ್ದರೆ, ಕಾಂಗ್ರೆಸ್ನಲ್ಲಿ ನಿರ್ಗತಿಕರಾಗಿರುವ ಬಹಳಷ್ಟು ನಾಯಕರಿದ್ದಾರೆ. ಫುಟ್ಪಾತ್ ಆಗಿರುವ ಅಂತಹ ನಾಯಕರಿಗೆ ಊಟ ಹಾಕಿಸಲಿ’ ಎಂದು ಅಶೋಕ ತರಾಟೆಗೆ ತೆಗೆದುಕೊಂಡರು.</p>.<p>‘ರಾಮನಗರ ಜಿಲ್ಲೆಯಲ್ಲಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್ ಹೆದರಿದ್ದಾರೆ. ಅವರಿಗೆ ಉಳಿದಿರುವುದು ಕನಕಪುರ ಕ್ಷೇತ್ರ ಮಾತ್ರ. ಅದನ್ನು ಉಳಿಸಿಕೊಳ್ಳಲಿ. ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾತನಾಡಿರುವುದು ಸರಿಯಾಗಿಯೇ ಇದೆ’ ಎಂದರು.</p>.<p>‘ಕಪಾಲ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚಾಗಿದೆ. ಒಂದೇ ಕೋಮಿಗೆ ಸೇರಿದವರಿಗೆ ಬೇಕಾಬಿಟ್ಟಿ ಜಮೀನು ಹಂಚಲಾಗಿದೆ. ಸರ್ಕಾರಿ ಭೂಮಿ ಲಪಟಾಯಿಸುವ ಪ್ರಯತ್ನವೂ ನಡೆದಿದೆ’ ಎಂದೂ ಅಶೋಕ ತಿಳಿಸಿದರು.</p>.<p>‘ನಾವು ಮುನೇಶ್ವರನ ಆರಾಧಕರು. ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ. ಶಿವಕುಮಾರ್ ಅವರೂ ಮುನೇಶ್ವರನ ಭಕ್ತರೇ ಆಗಿದ್ದಾರೆ. ಮುನೇಶ್ವರ ಬೆಟ್ಟ ಉಳಿಸಿಕೊಳ್ಳುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ಆರ್ಎಸ್ಎಸ್ನವರಿಗೆ ಊಟ ಹಾಕ್ತೀನಿ ಎನ್ನುವ ಡಿ.ಕೆ.ಶಿವಕುಮಾರ್ ಅವರು ಟಾಟಾನಾ– ಬಿರ್ಲಾನಾ’ ಎಂದು ಕಂದಾಯ ಸಚಿವ ಆರ್.ಅಶೋಕ ಲೇವಡಿ ಮಾಡಿದ್ದಾರೆ.</p>.<p>ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಆರ್ಎಸ್ಎಸ್ನವರಿಗೆ ಊಟ ಹಾಕಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದು ಅವರ ಅಹಂಕಾರದ ಪರಮಾವಧಿ. ಸಂಘ ಪರಿವಾರದವರಿಗೆ ಊಟ ಹಾಕಿಸುವ ಅಗತ್ಯವೂ ಇಲ್ಲ ಮತ್ತು ಡಿ.ಕೆಗೆ ನೈತಿಕತೆಯೂ ಇಲ್ಲ’ ಎಂದರು.</p>.<p>‘ಊಟ ಹಾಕಿಸುವುದಿದ್ದರೆ, ಕಾಂಗ್ರೆಸ್ನಲ್ಲಿ ನಿರ್ಗತಿಕರಾಗಿರುವ ಬಹಳಷ್ಟು ನಾಯಕರಿದ್ದಾರೆ. ಫುಟ್ಪಾತ್ ಆಗಿರುವ ಅಂತಹ ನಾಯಕರಿಗೆ ಊಟ ಹಾಕಿಸಲಿ’ ಎಂದು ಅಶೋಕ ತರಾಟೆಗೆ ತೆಗೆದುಕೊಂಡರು.</p>.<p>‘ರಾಮನಗರ ಜಿಲ್ಲೆಯಲ್ಲಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್ ಹೆದರಿದ್ದಾರೆ. ಅವರಿಗೆ ಉಳಿದಿರುವುದು ಕನಕಪುರ ಕ್ಷೇತ್ರ ಮಾತ್ರ. ಅದನ್ನು ಉಳಿಸಿಕೊಳ್ಳಲಿ. ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಾತನಾಡಿರುವುದು ಸರಿಯಾಗಿಯೇ ಇದೆ’ ಎಂದರು.</p>.<p>‘ಕಪಾಲ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚಾಗಿದೆ. ಒಂದೇ ಕೋಮಿಗೆ ಸೇರಿದವರಿಗೆ ಬೇಕಾಬಿಟ್ಟಿ ಜಮೀನು ಹಂಚಲಾಗಿದೆ. ಸರ್ಕಾರಿ ಭೂಮಿ ಲಪಟಾಯಿಸುವ ಪ್ರಯತ್ನವೂ ನಡೆದಿದೆ’ ಎಂದೂ ಅಶೋಕ ತಿಳಿಸಿದರು.</p>.<p>‘ನಾವು ಮುನೇಶ್ವರನ ಆರಾಧಕರು. ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ. ಶಿವಕುಮಾರ್ ಅವರೂ ಮುನೇಶ್ವರನ ಭಕ್ತರೇ ಆಗಿದ್ದಾರೆ. ಮುನೇಶ್ವರ ಬೆಟ್ಟ ಉಳಿಸಿಕೊಳ್ಳುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>