ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಇಕೆಬಾನ, ಪುಷ್ಪ ಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರ್ ಕಲೆ ಹಾಗೂ ಕುಬ್ಜ ಮರಗಳ ಸ್ಪರ್ಧೆಗಳನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮೈಸೂರು ವಿಭಾಗದ ಸುದ್ದಿ ಹಾಗೂ ಸಾರ್ವಜನಿಕ ಸಂಪರ್ಕ ಘಟಕದ ಮುಖ್ಯಸ್ಥೆ ಟಿ.ಸಿ.ಪೂರ್ಣಿಮಾ ಉದ್ಘಾಟಿಸಿದರು.