<p><strong>ಪೀಣ್ಯ ದಾಸರಹಳ್ಳಿ</strong>:‘ಕಕ್ಷಿದಾರನ ನಿರೀಕ್ಷೆಗಳಿಗೆ ತಕ್ಕಂತೆ ಕಾನೂನಿನ ಜ್ಞಾನ, ಪ್ರಕರಣಗಳ ಅಧ್ಯಯನದ ಮೂಲಕ ಅನುಭವ ಪಡೆದುಕೊಂಡು ಉತ್ತಮ ವಕೀಲರಾಗಿ ವೃತ್ತಿಯಲ್ಲಿ ಬೆಳವಣಿಗೆ ಹೊಂದಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ತಿಳಿಸಿದರು.</p>.<p>ಸಿಡೇದಹಳ್ಳಿಯ ಸೌಂದರ್ಯ ಕಾನೂನು ಕಾಲೇಜಿನಲ್ಲಿ 3ನೇ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ಈಗ ತಾಂತ್ರಿಕವಾಗಿ ನಾವು ಎಲ್ಲಾ ಕ್ಷೇತ್ರದಲ್ಲೂ ಸಾಧಿಸಿದ್ದೇವೆ. ಕಾನೂನು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬೆರಳ ತುದಿಯಲ್ಲೇ ಪ್ರಕರಣಗಳ ಮಾಹಿತಿ ಸಿಗಲಿದೆ. ಆದರೆ, ಪ್ರಕರಣಗಳ ಆಳ ಅಧ್ಯಯನ, ವಿಶ್ಲೇಷಣಾತ್ಮಕ ನೋಟ, ತಜ್ಞರ ಅನುಭವ ಪಡೆದುಕೊಳ್ಳುವುದರಿಂದ ಮಾತ್ರ ಯಶಸ್ವಿ ವಕೀಲರಾಗಬಹುದು’ ಎಂದು ಸಲಹೆ ನೀಡಿದರು.</p>.<p>ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೀರ್ತನ್ ಕುಮಾರ್ ಮಾತನಾಡಿ,' ದೇಶದಾದ್ಯಂತ ಕಾನೂನು ಕಾಲೇಜುಗಳಿಂದ 43 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಕೀಲರಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು</p>.<p>ತುಮಕೂರು ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಎನ್.ಸತೀಶ್ಗೌಡ, ಸರ್ಕಾರಿ ವಕೀಲ ಎಸ್.ಎಸ್. ಮಹೇಂದ್ರ, ಡಿ.ಎಂ. ಹೆಗಡೆ, ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ ಹಾಜರಿದ್ದರು.</p>.<div><blockquote>ಸಂವಿಧಾನವನ್ನು ಮೊದಲು ನೀವು ಪಾಲನೆ ಮಾಡಿ. ದೇಶದ ಒಳಿತಿಗೆ ಮೌಲ್ಯ ಸಂಸ್ಕೃತಿಯನ್ನು ಕಾಪಾಡಿ. ನಿಮ್ಮ ತಂದೆ ತಾಯಿಯನ್ನು ಗೌರವಿಸಿ</blockquote><span class="attribution">ಇ ಎಸ್ ಇಂದ್ರೇಶ್ ನ್ಯಾಯಮೂರ್ತಿ ಕರ್ನಾಟಕ ಉಚ್ಚ ನ್ಯಾಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ</strong>:‘ಕಕ್ಷಿದಾರನ ನಿರೀಕ್ಷೆಗಳಿಗೆ ತಕ್ಕಂತೆ ಕಾನೂನಿನ ಜ್ಞಾನ, ಪ್ರಕರಣಗಳ ಅಧ್ಯಯನದ ಮೂಲಕ ಅನುಭವ ಪಡೆದುಕೊಂಡು ಉತ್ತಮ ವಕೀಲರಾಗಿ ವೃತ್ತಿಯಲ್ಲಿ ಬೆಳವಣಿಗೆ ಹೊಂದಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ತಿಳಿಸಿದರು.</p>.<p>ಸಿಡೇದಹಳ್ಳಿಯ ಸೌಂದರ್ಯ ಕಾನೂನು ಕಾಲೇಜಿನಲ್ಲಿ 3ನೇ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ಈಗ ತಾಂತ್ರಿಕವಾಗಿ ನಾವು ಎಲ್ಲಾ ಕ್ಷೇತ್ರದಲ್ಲೂ ಸಾಧಿಸಿದ್ದೇವೆ. ಕಾನೂನು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬೆರಳ ತುದಿಯಲ್ಲೇ ಪ್ರಕರಣಗಳ ಮಾಹಿತಿ ಸಿಗಲಿದೆ. ಆದರೆ, ಪ್ರಕರಣಗಳ ಆಳ ಅಧ್ಯಯನ, ವಿಶ್ಲೇಷಣಾತ್ಮಕ ನೋಟ, ತಜ್ಞರ ಅನುಭವ ಪಡೆದುಕೊಳ್ಳುವುದರಿಂದ ಮಾತ್ರ ಯಶಸ್ವಿ ವಕೀಲರಾಗಬಹುದು’ ಎಂದು ಸಲಹೆ ನೀಡಿದರು.</p>.<p>ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೀರ್ತನ್ ಕುಮಾರ್ ಮಾತನಾಡಿ,' ದೇಶದಾದ್ಯಂತ ಕಾನೂನು ಕಾಲೇಜುಗಳಿಂದ 43 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಕೀಲರಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು</p>.<p>ತುಮಕೂರು ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಎನ್.ಸತೀಶ್ಗೌಡ, ಸರ್ಕಾರಿ ವಕೀಲ ಎಸ್.ಎಸ್. ಮಹೇಂದ್ರ, ಡಿ.ಎಂ. ಹೆಗಡೆ, ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ ಹಾಜರಿದ್ದರು.</p>.<div><blockquote>ಸಂವಿಧಾನವನ್ನು ಮೊದಲು ನೀವು ಪಾಲನೆ ಮಾಡಿ. ದೇಶದ ಒಳಿತಿಗೆ ಮೌಲ್ಯ ಸಂಸ್ಕೃತಿಯನ್ನು ಕಾಪಾಡಿ. ನಿಮ್ಮ ತಂದೆ ತಾಯಿಯನ್ನು ಗೌರವಿಸಿ</blockquote><span class="attribution">ಇ ಎಸ್ ಇಂದ್ರೇಶ್ ನ್ಯಾಯಮೂರ್ತಿ ಕರ್ನಾಟಕ ಉಚ್ಚ ನ್ಯಾಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>