<p><strong>ಕೆ.ಆರ್.ಪುರ:</strong> ‘ಶಾಲೆಯ ಮಕ್ಕಳಿಗೆ ನಮ್ಮ ದೇಶದ ಸಂಸ್ಕ್ರತಿಯನ್ನು ಪರಿಚಯಿಸುವ ಉದ್ದೇಶದಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ್– ಕಲಾ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಡಿಆರ್ಡಿಒ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎಚ್.ನಾರಾಯಣರಾವ್ ಹೇಳಿದರು.</p>.<p>ಕೆ.ಆರ್.ಪುರ ಸಮೀಪದ ನಾಗವಾರಪಾಳ್ಯದ ಡಿಆರ್ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ’ಕೆವಿಎಸ್ ರಾಷ್ಟ್ರೀಯ ಏಕ್ತಾ ಪರ್ವ-2024-25, ಏಕ್ ಭಾರತ ಶ್ರೇಷ್ಠ ಭಾರತ್ ಕಲಾ ಉತ್ಸವ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>’ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿ, ಕ್ರೀಡೆ, ಜನಪದ ಎಲ್ಲವೂ ಭಿನ್ನವಾಗಿರುತ್ತದೆ. ಇಂಥ ಸಂಸ್ಕೃತಿಯನ್ನು ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಒಂಬತ್ತು ಶಾಖೆಗಳ ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ಉತ್ತರಕಾಂಡ ರಾಜ್ಯದ ಸಂಸ್ಕೃತಿ ಬಿಂಬಿಸುವ ಹಲವು ಕಲಾ ಪ್ರದರ್ಶನಗಳನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.</p>.<p>ಕಲಾ ಉತ್ಸವದಲ್ಲಿ, ಕೆ.ಆರ್.ಪುರ ಕೇಂದ್ರೀಯ ವಿದ್ಯಾಲಯ, ಎನ್ಎಲ್ನ ಕೇಂದ್ರೀಯ ವಿದ್ಯಾಲಯ, ಯಲಹಂಕದ ಎಎಸ್ಸಿ ಕೇಂದ್ರದ ಕೇಂದ್ರೀಯ ವಿದ್ಯಾಲಯ, ಗೌರಿಬಿದನೂರು ಸೇರಿ ಒಂಬತ್ತು ಶಾಖೆಗಳಿಂದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗುಂಪು ನೃತ್ಯ, ಏಕಾಭಿನಯ, ಗೀತಾ ಗಾಯನ, ವಾದ್ಯ ಸಂಗೀತ ಏರ್ಪಡಿಸಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ಡಿಆರ್ಡಿಒ ವಿಜ್ಞಾನಿ ಹಾಗೂ ಕೇಂದ್ರೀಯ ವಿದ್ಯಾಲಯಗಳ ಸಮಿತಿ ನಾಮನಿರ್ದೇಶಿತ ಅಧ್ಯಕ್ಷೆ ವರ್ಷಾ ಅಗರವಾಲ್, ಕಾರ್ಯಕ್ರಮ ಸಂಯೋಜಕ ಶ್ರೀಹರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ‘ಶಾಲೆಯ ಮಕ್ಕಳಿಗೆ ನಮ್ಮ ದೇಶದ ಸಂಸ್ಕ್ರತಿಯನ್ನು ಪರಿಚಯಿಸುವ ಉದ್ದೇಶದಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ್– ಕಲಾ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಡಿಆರ್ಡಿಒ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎಚ್.ನಾರಾಯಣರಾವ್ ಹೇಳಿದರು.</p>.<p>ಕೆ.ಆರ್.ಪುರ ಸಮೀಪದ ನಾಗವಾರಪಾಳ್ಯದ ಡಿಆರ್ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ’ಕೆವಿಎಸ್ ರಾಷ್ಟ್ರೀಯ ಏಕ್ತಾ ಪರ್ವ-2024-25, ಏಕ್ ಭಾರತ ಶ್ರೇಷ್ಠ ಭಾರತ್ ಕಲಾ ಉತ್ಸವ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>’ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿ, ಕ್ರೀಡೆ, ಜನಪದ ಎಲ್ಲವೂ ಭಿನ್ನವಾಗಿರುತ್ತದೆ. ಇಂಥ ಸಂಸ್ಕೃತಿಯನ್ನು ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಒಂಬತ್ತು ಶಾಖೆಗಳ ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ಉತ್ತರಕಾಂಡ ರಾಜ್ಯದ ಸಂಸ್ಕೃತಿ ಬಿಂಬಿಸುವ ಹಲವು ಕಲಾ ಪ್ರದರ್ಶನಗಳನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.</p>.<p>ಕಲಾ ಉತ್ಸವದಲ್ಲಿ, ಕೆ.ಆರ್.ಪುರ ಕೇಂದ್ರೀಯ ವಿದ್ಯಾಲಯ, ಎನ್ಎಲ್ನ ಕೇಂದ್ರೀಯ ವಿದ್ಯಾಲಯ, ಯಲಹಂಕದ ಎಎಸ್ಸಿ ಕೇಂದ್ರದ ಕೇಂದ್ರೀಯ ವಿದ್ಯಾಲಯ, ಗೌರಿಬಿದನೂರು ಸೇರಿ ಒಂಬತ್ತು ಶಾಖೆಗಳಿಂದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗುಂಪು ನೃತ್ಯ, ಏಕಾಭಿನಯ, ಗೀತಾ ಗಾಯನ, ವಾದ್ಯ ಸಂಗೀತ ಏರ್ಪಡಿಸಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ಡಿಆರ್ಡಿಒ ವಿಜ್ಞಾನಿ ಹಾಗೂ ಕೇಂದ್ರೀಯ ವಿದ್ಯಾಲಯಗಳ ಸಮಿತಿ ನಾಮನಿರ್ದೇಶಿತ ಅಧ್ಯಕ್ಷೆ ವರ್ಷಾ ಅಗರವಾಲ್, ಕಾರ್ಯಕ್ರಮ ಸಂಯೋಜಕ ಶ್ರೀಹರಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>