<p><strong>ಬೆಂಗಳೂರು:</strong> ‘ಸೈಬರ್ ಅಪರಾಧಗಳನ್ನು ಮಟ್ಟ ಹಾಕುವ ಸಲುವಾಗಿ ‘ಸೈಬರ್ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)’ ಶೀಘ್ರವೇ ಕಾರ್ಯಾರಂಭ ಮಾಡಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.</p>.<p>ಎಚ್ಎಸ್ಆರ್ ಬಡಾವಣೆ ಠಾಣೆಯ ಆವರಣದಲ್ಲಿ ನವೀಕೃತ ಸಿಇಎನ್ ಪೊಲೀಸ್ ಠಾಣೆಯನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು.</p>.<p>‘ಸಾರ್ವಜನಿಕ ದೂರುಗಳಿಗೆ ತುರ್ತು ಸಂಖ್ಯೆ-100 ಕಾರ್ಯನಿರ್ವಹಿಸುತ್ತಿದೆ. ಇದೇ ಸಂಖ್ಯೆಯನ್ನು ಸೈಬರ್ ಕೃತ್ಯಗಳ ಸಂಬಂಧ ದೂರು ನೀಡಲು ಬಳಕೆ ಮಾಡಲಾಗುವುದು. 100ಕ್ಕೆ ಕರೆ ಮಾಡಿದರೆ ಒಂದು ಮತ್ತು ಎರಡು ಎಂಬ ಆಯ್ಕೆಗಳು ಬರಲಿವೆ. ಸಾರ್ವಜನಿಕರು ಸುಲಭವಾಗಿ ದೂರು ನೀಡಬಹುದು’ಎಂದು ಮಾಹಿತಿ ನೀಡಿದರು.</p>.<p>‘ಕಂಟ್ರೋಲ್ ರೂಂನಲ್ಲೇ ಸೈಬರ್ ವಂಚನೆ ದೂರು ಸ್ವೀಕರಿಸುವ ಪ್ರತ್ಯೇಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಬರುವ ದೂರು ಆಧರಿಸಿ ಸಿಬ್ಬಂದಿ, ಬ್ಯಾಂಕ್ಗಳಿಗೆ ಇಮೇಲ್ ಕಳುಹಿಸಿ ವಿವರ ಸಲ್ಲಿಸಲಿದ್ದಾರೆ. ಇದು ಐದಾರು ನಿಮಿಷಗಳ ಪ್ರಕ್ರಿಯೆ. ಈ ಮೂಲಕ ವಂಚಕರ ಖಾತೆಗೆ ಬಿದ್ದ ಹಣ ತಡೆ ಹಿಡಿಯಬಹುದು. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಸಮ್ಮತಿ ನೀಡಿದೆ’ ಎಂದರು.</p>.<p>‘ಸಾರ್ವಜನಿಕರು ಹಣ ಕಳೆದುಕೊಂಡ ಮೊದಲ ಒಂದು ಗಂಟೆ 'ಗೋಲ್ಡನ್ ಅವರ್’ ಆಗಿರುತ್ತದೆ. ಆರೋಪಿ ಖಾತೆಗೆ ಬಿದ್ದ ಹಣ ತಡೆಯಲು ಈ ಅವಧಿ ಮಹತ್ವದ್ದು. ಇದಕ್ಕಾಗಿ ಸಾಫ್ಟ್ವೇರ್ ಹಾಗೂ ಆ್ಯಪ್ ರೂಪಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸೈಬರ್ ಅಪರಾಧಗಳನ್ನು ಮಟ್ಟ ಹಾಕುವ ಸಲುವಾಗಿ ‘ಸೈಬರ್ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ)’ ಶೀಘ್ರವೇ ಕಾರ್ಯಾರಂಭ ಮಾಡಲಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.</p>.<p>ಎಚ್ಎಸ್ಆರ್ ಬಡಾವಣೆ ಠಾಣೆಯ ಆವರಣದಲ್ಲಿ ನವೀಕೃತ ಸಿಇಎನ್ ಪೊಲೀಸ್ ಠಾಣೆಯನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು.</p>.<p>‘ಸಾರ್ವಜನಿಕ ದೂರುಗಳಿಗೆ ತುರ್ತು ಸಂಖ್ಯೆ-100 ಕಾರ್ಯನಿರ್ವಹಿಸುತ್ತಿದೆ. ಇದೇ ಸಂಖ್ಯೆಯನ್ನು ಸೈಬರ್ ಕೃತ್ಯಗಳ ಸಂಬಂಧ ದೂರು ನೀಡಲು ಬಳಕೆ ಮಾಡಲಾಗುವುದು. 100ಕ್ಕೆ ಕರೆ ಮಾಡಿದರೆ ಒಂದು ಮತ್ತು ಎರಡು ಎಂಬ ಆಯ್ಕೆಗಳು ಬರಲಿವೆ. ಸಾರ್ವಜನಿಕರು ಸುಲಭವಾಗಿ ದೂರು ನೀಡಬಹುದು’ಎಂದು ಮಾಹಿತಿ ನೀಡಿದರು.</p>.<p>‘ಕಂಟ್ರೋಲ್ ರೂಂನಲ್ಲೇ ಸೈಬರ್ ವಂಚನೆ ದೂರು ಸ್ವೀಕರಿಸುವ ಪ್ರತ್ಯೇಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಬರುವ ದೂರು ಆಧರಿಸಿ ಸಿಬ್ಬಂದಿ, ಬ್ಯಾಂಕ್ಗಳಿಗೆ ಇಮೇಲ್ ಕಳುಹಿಸಿ ವಿವರ ಸಲ್ಲಿಸಲಿದ್ದಾರೆ. ಇದು ಐದಾರು ನಿಮಿಷಗಳ ಪ್ರಕ್ರಿಯೆ. ಈ ಮೂಲಕ ವಂಚಕರ ಖಾತೆಗೆ ಬಿದ್ದ ಹಣ ತಡೆ ಹಿಡಿಯಬಹುದು. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಸಮ್ಮತಿ ನೀಡಿದೆ’ ಎಂದರು.</p>.<p>‘ಸಾರ್ವಜನಿಕರು ಹಣ ಕಳೆದುಕೊಂಡ ಮೊದಲ ಒಂದು ಗಂಟೆ 'ಗೋಲ್ಡನ್ ಅವರ್’ ಆಗಿರುತ್ತದೆ. ಆರೋಪಿ ಖಾತೆಗೆ ಬಿದ್ದ ಹಣ ತಡೆಯಲು ಈ ಅವಧಿ ಮಹತ್ವದ್ದು. ಇದಕ್ಕಾಗಿ ಸಾಫ್ಟ್ವೇರ್ ಹಾಗೂ ಆ್ಯಪ್ ರೂಪಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>