ಬೆಂಗಳೂರು: ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್ ಆವರಣದಲ್ಲಿ 5 ಎಕರೆ ಜಾಗ ನೀಡಲು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಒಪ್ಪಿಕೊಂಡಿದ್ದಾರೆ.
ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಬಾರದು ಎಂದು ಮೈಸೂರಿನ ಸಾಹಿತಿಗಳು, ಗಣ್ಯರು ಒತ್ತಡ ಹೇರಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ರಾಜ್ಯ ಸರ್ಕಾರ 3 ಎಕರೆ ಭೂಮಿ ನೀಡಲು ಒಪ್ಪಿಕೊಂಡಿತ್ತು.
ತಮಿಳುನಾಡು, ಆಂಧ್ರ ರಾಜ್ಯಗಳು ಅಲ್ಲಿನ ಶಾಸ್ತ್ರೀಯ ಭಾಷಾ ಕೇಂದ್ರಗಳ ಸ್ಥಾಪನೆಗೆ 15 ರಿಂದ 20 ಎಕರೆ ಜಾಗ ಮೀಸಲಿಟ್ಟಿವೆ. ಈ ಕುರಿತು ಸಚಿವ ಸಿ.ಟಿ.ರವಿ ಅವರು ಅಶ್ವತ್ಥನಾರಾಯಣ ಅವರ ಗಮನ ಸೆಳೆದರು.