ಬೆಂಗಳೂರು: ಗೀತ ರಚನೆಕಾರ, ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರ ಗೀತೆಗಳ ಗಾಯನದ ವಿಶೇಷ ಕಾರ್ಯಕ್ರಮ ‘ತುಂತುರು ಇಲ್ಲಿ ನೀರ ಹಾಡು’ ಶನಿವಾರ ಸಂಜೆ ಬೆಂಗಳೂರಿನ ಬಸವನಗುಡಿ ಎನ್.ಆರ್.ಕಾಲೊನಿಯ ಡಾ.ಅಶ್ವತ್ಥ್ ಕಲಾಭವನದಲ್ಲಿ ನಡೆಯಿತು.
ಓಜಸ್ ಸ್ವಸ್ತಿ ಈವೆಂಟ್ಸ್ ಸಂಸ್ಥೆಯ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಲ್ಯಾಣ್ ಅವರನ್ನು ಸನ್ಮಾನಿಸಲಾಯಿತು. ಕಲ್ಯಾಣ್ ಅವರ ರಚನೆ, ಸಂಗೀತ ನಿರ್ದೇಶನದ ಗೀತೆಗಳನ್ನು ಗಾಯಕರಾದ ಜಯಸಿಂಹಮತ್ತು ತಂಡದವರು ಹಾಡಿದರು. ಸಂಗೀತ ನಿರ್ದೇಶಕ ವಿ.ಮನೋಹರ್ ಉಪಸ್ಥಿತರಿದ್ದರು.