ಬಿಜೆಪಿಯಲ್ಲಿ ಯುವಮೋರ್ಚಾದ ಅನಿಲ್ ಶೆಟ್ಟಿ, ಶ್ರೀಧರ್ ರೆಡ್ಡಿ, ಜಯದೇವ್ ಅವರು ಆಕಾಂಕ್ಷಿಗಳಾಗಿದ್ದಾರೆ. ಆದರೆ 2008ರಲ್ಲಿ ಪ್ರಸಾದ್ ರೆಡ್ಡಿ ನೀಡಿದ್ದ ಪೈಪೋಟಿಯನ್ನು ಮತ್ತೆ ನೀಡುವ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ. ಕಳೆದ ಬಾರಿಯೂ ಬಿಜೆಪಿ 46 ಸಾವಿರದಷ್ಟು ಮತ ಪಡೆದಿದ್ದರೂ 20 ಸಾವಿರ ಅಂತರದಲ್ಲಿ ಸೋಲು ಕಂಡಿತ್ತು. ಹೀಗಾಗಿ, ಪ್ರಬಲ ಸ್ಪರ್ಧಿಯನ್ನು ಬಿಜೆಪಿ ಕಣಕ್ಕಿಳಿಸಲು ಉದ್ದೇಶಿಸಿದೆ. ರೆಡ್ಡಿ ಸಮುದಾಯದ ಮತಗಳನ್ನು ಸೆಳೆಯಲು ಕೆ.ಆರ್. ಪುರದಲ್ಲಿ ಬಸವರಾಜು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ನಂದೀಶ್ ರೆಡ್ಡಿ ಈ ಬಾರಿ ಬಿಟಿಎಂ ಲೇಔಟ್ನಲ್ಲಿ ಕಣಕ್ಕಿಳಿಸುವ ಯೋಜನೆ ತಯಾರಾಗುತ್ತಿದೆ.