ಹೊಸ ಸಚಿವರ ಪರಿಚಯ ಮಾಡಿಕೊಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾವೇರಿ ಅವರು ಮುಖ್ಯಮಂತ್ರಿ ಅವರಿಗೆ ಸೂಚಿಸಿದರು. ‘ಎಸ್.ಟಿ. ಸೋಮಶೇಖರ್, ಸಹಕಾರ ಸಚಿವರು’, ‘ಆನಂದ್ ಸಿಂಗ್– ಅರಣ್ಯ ಸಚಿವರು’, ‘ಬೈರತಿ ಬಸವರಾಜ್– ನಗರಾಭಿವೃದ್ಧಿ ಸಚಿವರು’ ಎಂದು ಪರಿಚಯಿಸಲು ಆರಂಭಿಸಿದರು. ಆಗ ಸೋಮಶೇಖರ್, ಆನಂದ್ ಸಿಂಗ್ ಸದನದಲ್ಲಿ ಇರಲಿಲ್ಲ. ‘ಸಚಿವರು ಸದನದಲ್ಲೇ ಇಲ್ಲ. ಇಲ್ಲದ ಸಚಿವರನ್ನು ಪರಿಚಯಿಸುವುದು ಏಕೆ’ ಎಂದು ಕಾಂಗ್ರೆಸ್ ಸದಸ್ಯರು ಕಾಲೆಳೆದರು.